Advertisement

Mangaluru ಬಸ್‌ನಿಂದ ಬಿದ್ದು ಪ್ರಯಾಣಿಕನ ತಲೆಗೆ ಗಾಯ

08:07 PM Jul 28, 2023 | Team Udayavani |

ಮಂಗಳೂರು: ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಪ್ರಯಾಣಿಕನೋರ್ವ ಗಾಯಗೊಂಡ ಘಟನೆ ನಗರದ ಶಿವಭಾಗ್‌ ಬಳಿ ಸಂಭವಿಸಿದೆ.

Advertisement

ಹರೀಶ್‌ ಗಾಯಗೊಂಡವರು. ಅವರು ಬುಧವಾರ ಬೆಳಗ್ಗೆ 8.30ಕ್ಕೆ ಕುಲಶೇಖರ ಬಸ್‌ ನಿಲ್ದಾಣದಿಂದ ಶಿವಭಾಗ್‌ ಕಡೆಗೆ ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದರು. ಶಿವಭಾಗ್‌ ಸಮೀಪಿಸುತ್ತಿದ್ದರಿಂದ ತಾನು ಕುಳಿತಿದ್ದ ಸೀಟಿನಿಂದ ಎದ್ದು ಬಸ್‌ನ ಹಿಂಬಾಗಿಲ ಬಳಿಗೆ ಬರುತ್ತಿದ್ದರು.

ಬಸ್‌ ಚಾಲಕ ಜಿಮ್ಮಿಸ್‌ ಸೂಪರ್‌ ಮಾರ್ಟ್‌ ಎದುರು ಇದ್ದ ಹಂಪ್ಸ್‌ನಲ್ಲಿ ಬಸ್ಸನ್ನು ನಿಧಾನಗೊಳಿಸದೆ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಹರೀಶ್‌ ಅವರು ಮೆಟ್ಟಿಲುಗಳ ಮೂಲಕ ರಸ್ತೆಗೆ ಬಿದ್ದು ಅವರ ತಲೆಗೆ ಗಾಯವಾಗಿದೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next