Advertisement

ನದಿಯಲ್ಲಿ ಹಡಗುಗಳ ಡಿಕ್ಕಿ : 26 ಜನರ ದುರ್ಮರಣ

06:13 PM Apr 05, 2021 | Team Udayavani |

ಢಾಕಾ : ಎರಡು ಹಡಗುಗಳು ನಡುವೆ ಡಿಕ್ಕಿ ಸಂಭವಿಸಿ 26 ಜನರು ದುರ್ಮರಣ ಹೊಂದಿರುವ ಭೀಕರ ದುರ್ಘಟನೆ ಬಾಂಗ್ಲಾದೇಶದ ಶಿತಲಖ್ಯಾ ನದಿಯಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ನಾರಾಯಣಗಂಜ್ ಜಿಲ್ಲೆಯಿಂದ 16 ಕಿ.ಮೀ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. 100 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ಹಡಗು ಸರಕು ಸಾಗಾಣಿಕೆಯ ಹಡಗಿಗೆ ಡಿಕ್ಕಿ ಹೊಡೆದು ನದಿ ನೀರಿನಲ್ಲಿ ಮುಳುಗಡೆಯಾಗಿದೆ.

ಕೋಸ್ಟ್ ಗಾರ್ಡ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಭಾನುವಾರ ಐದು ಹಾಗೂ ಸೋಮವಾರ 21 ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ ಎಂದು ವರದಿಗಳು ತಿಳಿಸಿವೆ.

ತನಿಖೆ :
ಘಟನೆ ಕುರಿತು ತನಿಖೆ ನಡೆಸಲು ಏಳು ಜನ ಸದಸ್ಯರ ಸಮಿತಿ ರಚಿಸಿರುವುದಾಗಿ ನಾರಾಯಣಗಂಜ್ ಜಿಲ್ಲಾಧಿಕಾರಿ ಮೊಸ್ಟೈನ್ ಬಿಲ್ಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಿಲ್ಲಾಡಳಿತದಿಂದ ಮೃತರ ಪ್ರತಿ ಕುಟುಂಬಗಳಿಗೆ ಪರಿಹಾರ (296 ಅಮೆರಿಕನ್ ಡಾಲರ್ ) ನೀಡುವುದಾಗಿ ಅವರು ಹೇಳಿದ್ದಾರೆ.

ಇನ್ನು ಬಾಂಗ್ಲಾದೇಶದ ಒಳನಾಡಿನ ಜಲ ಸಾರಿಗೆ ಪ್ರಾಧಿಕಾರವು ಸಹ ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡಲು ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next