Advertisement

ಪರಿಷತ್ತು ಸದಸ್ಯರ ಪಾಸ್‌ ದುರ್ಬಳಕೆ; ಪೊಲೀಸ್‌ ಆಯುಕ್ತರ ಎಚ್ಚರಿಕೆ ಛಾಟಿ

02:01 PM Apr 29, 2020 | Suhan S |

ಹುಬ್ಬಳ್ಳಿ: ವಿಧಾನಸಭೆ-ವಿಧಾನ ಪರಿಷತ್ತು ಸದಸ್ಯರ ವಾಹನ ಪಾಸ್‌ಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕುರಿತಂತೆ ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ ಅವರು ಮಂಗಳವಾರ ಒಂದಿಬ್ಬರಿಗೆ ಎಚ್ಚರಿಕೆಯ ಛಾಟಿ ಬೀಸಿದ್ದಾರೆ.

Advertisement

ಮಂಗಳವಾರ ಸಂಜೆ ಬಸವವನದ ಬಳಿ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ತಡೆದು ವಾಹನಗಳ ಪರಿಶೀಲನೆ ಹಾಗೂ ವಾಹನ ಸೀಜ್‌ ಮಾಡುವ ಸಂದರ್ಭದಲ್ಲಿ, ವಿಧಾನ ಪರಿಷತ್ತು ಸದಸ್ಯರ ಪಾಸ್‌ ಹೊಂದಿದ ವಾಹನವೊಂದು ಬಂದಿದೆ. ಅದನ್ನು ಪರಿಶೀಲಿಸಿದಾಗ, ಅದು ಕಾಂಗ್ರೆಸ್‌ ಮುಖಂಡರೊಬ್ಬರಿಗೆ ಸೇರಿದ ವಾಹನವಾಗಿತ್ತು.

ಅದು ವಿಧಾನ ಪರಿಷತ್ತು ಸದಸ್ಯರಿಗೆ ಸೇರಿದ ವಾಹನ ಅಲ್ಲ ಎಂಬುದನ್ನು ಅರಿತ ಪೊಲೀಸ್‌ ಆಯುಕ್ತರು ಪಾಸ್‌ಗಳ ದುರ್ಬಳಕೆ ಬಗ್ಗೆ  ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಧ್ವನಿವರ್ಧಕದಲ್ಲೇ ಇದು ಪಾಸ್‌ಗಳ ದುರ್ಬಳಕೆ ಎಂದು ಕಾಂಗ್ರೆಸ್‌ ಮುಖಂಡನಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಮಹಾನಗರದಲ್ಲಿ ಕೆಲವರು ವಿಧಾನಸಭೆ, ವಿಧಾನ ಪರಿಷತ್ತು ಸದಸ್ಯರ ಪಾಸ್‌ಗಳನ್ನು ತಮ್ಮ ವಾಹನಗಳಿಗೆ ಬಳಕೆ ಮಾಡುತ್ತಿದ್ದು, ಇನ್ನಾದರೂ ಪೊಲೀಸರು ಈ ಬಗ್ಗೆ ಸ್ಪಷ್ಟ ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next