Advertisement

ಪಾರ್ಟಿ ಮುಗಿಸಿ ಹೊರಟವ ಅಪಘಾತದಲ್ಲಿ ದುರ್ಮರಣ

12:18 PM Feb 15, 2017 | |

ಬೆಂಗಳೂರು: ಪಾರ್ಟಿ ಮುಗಿಸಿ, ಸ್ನೇಹಿತರೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಎಂಜಿನಿಯರಿಂಗ್‌ ವಿದ್ಯಾರ್ಥಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಆನಂದನಗರದ ನಿವಾಸಿ ಸುನೀಲ್‌ಕುಮಾರ್‌ (23) ಮೃತ ವಿದ್ಯಾರ್ಥಿ.  ಸುನೀಲ್‌ ಸ್ನೇಹಿತರಾದ ಗೌತಮ್‌, ವಿಘ್ನೇಶ್‌ ಮತ್ತು ಅನೂಪ್‌ ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

ಕಾರು ಚಾಲನೆ ಮಾಡುತ್ತಿದ್ದ ವಿಘ್ನೇಶ್‌ ಮದ್ಯ ಸೇವಿಸಿರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ವೈದ್ಯಕೀಯ ವರದಿ ಕೈ ಸೇರಿದ ಬಳಿಕ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಸುನೀಲ್‌ ಕುಮಾರ್‌ ನಗರದ ರಾಜೀವ್‌ಗಾಂಧಿ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ 8ನೇ ಸೆಮಿಸ್ಟರ್‌ ವ್ಯಾಸಂಗ ಮಾಡುತ್ತಿದ್ದರು.

ಸೋಮವಾರ ರಾತ್ರಿ ಸುನೀಲ್‌ ಸೇರಿ ನಾಲ್ವರು ಸ್ನೇಹಿತರು ಪಾರ್ಟಿ ಮುಗಿ ಮನೆಗೆ ತೆರಳುತ್ತಿದ್ದರು. ವಿಘ್ನೇಶ್‌ ಕಾರು ಚಾಲನೆ ಮಾಡುತ್ತಿದ್ದರು. ಅನೂಪ್‌ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದು, ಮೃತ ಸುನೀಲ್‌ ಮತ್ತು ಗೌತಮ್‌ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ರಾತ್ರಿ 12.30ರ ಸುಮಾರಿಗೆ ಆರ್‌ ಟಿ ನಗರ ಸಮೀಪದ ತರಳಬಾಳು ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರು ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.

ಪರಿಣಾಮ ಹಿಂಬದಿ ಕುಳಿತಿದ್ದ ಸುನೀಲ್‌ ಕುಮಾರ್‌ನ ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳೀಯರು ಇನ್ನುಳಿದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ಗಾಯಾಳುಗಳಿಗೂ ಗಂಭೀರ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next