Advertisement

ಮರಾಠ ಮೀಸಲಾತಿ: ಸರ್ವಾನುಮತದ ನಿಲುವಿಗೆ ಸರ್ವಪಕ್ಷ ನಿರ್ಧಾರ ?

07:13 PM Jul 28, 2018 | Team Udayavani |

ಮುಂಬಯಿ : ರಾಜ್ಯದಲ್ಲಿನ ಎಲ್ಲ ಪಕ್ಷಗಳು ಮರಾಠ ಮೀಸಲಾತಿ ವಿಷಯದಲ್ಲಿ ಸರ್ವಾನುಮತದ ನಿಲುವನ್ನು ತಳೆಯಲು ನಿರ್ಧರಿಸಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ಸರ್ವ ಪಕ್ಷಗಳ ಸಭೆಯ ಬಳಿಕ ಫ‌ಡ್ನವೀಸ್‌ ಅವರು ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದರು.

ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳ ಅಭಿಪ್ರಾಯವು ಏಕರೀತಿಯದ್ದಾಗಿದೆ; ಅಂತೆಯೇ ಈ ವಿಷಯದಲ್ಲಿ ನಾವು ಸರ್ವಾನುಮತದ ನಿಲುವಿಗೆ ನಿರ್ಧರಿಸಿದ್ದೇವೆ ಎಂದು ಫ‌ಡ್ನವೀಸ್‌ ಹೇಳಿದರು.

ನಮ್ಮ ಸಹೋದ್ಯೋಗಿಗಳಿಗೆ ಏನಾದರೂ ಪ್ರಾಯೋಗಿಕ ಸಮಸ್ಯೆ ಇದ್ದರೆ ನಾವು ಅವರೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ; ಆದರೆ ಶುಲ್ಕ ವಿಚಾರದಲ್ಲಿ ಮರಾಠ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಟ್ಟಲ್ಲಿ ಶಿಕ್ಷಣ ಇಲಾಖೆಯ ಅವರ ನೋಂದಣೆಯನ್ನು ರದ್ದು ಮಾಡಲಿದೆ ಎಂದು ಫ‌ಡ್ನವೀಸ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next