Advertisement
ನಗರದಲ್ಲಿರುವ ಐತಿಹಾಸಿಕ ಜಲಮೂಲದ ಬಾವಡಿಗಳಲ್ಲಿ ಗಣೇಶ ಉತ್ಸವದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಇದರಿಂದ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಈ ಬಾವಿಗಳು ನಿರ್ಜೀವಗೊಂಡಿದ್ದವು. ಆದರೆ ಕೆಲ ತಿಂಗಳ ಹಿಂದೆ ಈ ಐತಿಹಾಸಿಕ ಬಾವಿಗಳ ಪುನಶ್ಚೇತನ ಕಾರ್ಯ ನಡೆದಿದ್ದು, ಅವು ಪುನರುಜ್ಜೀವನಗೊಂಡು ಜೀವಜಲ ಧುಮ್ಮಿಕ್ಕುತ್ತಿದೆ. ಇದರಿಂದ ಪಾರಂಪರಿಕ ಬಾವಿಗಳು ಮರುಜೀವ ಪಡೆದಿವೆ.
ಕಾರಣವಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ದಂಡ ವಿಧಿಸುವ ಹಾಗೂ ಜೈಲಿಗೆ ಹಾಕುವುದಾಗಿಯೂ ಎಚ್ಚರಿಸಿದೆ. ಅದಲ್ಲದೆ, ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್, ಪರಿಸರ, ಕಂದಾಯ ಇಲಾಖೆ ಅಧಿಕಾರಿಗಳ ತಂಡ ಕಟ್ಟಿಕೊಂಡು ಪಿಒಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ನಗರದ ಸೈನಿಕ ಸ್ಕೂಲ್ ಬಳಿಯ ಶಾಸ್ತ್ರೀ ನಗರದಲ್ಲಿ ಸುರೇಶ ಅಫ್ಜಲಪುರ ಎಂಬುವರ ಮನೆ ಮೇಲೆ ದಾಳಿ ನಡೆಸಿರುವ ಪಿಒಪಿ ರಾಸಾಯನಿಕ ಬಳಸಿ ತಯಾರಿಸಿದ 184 ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದ
ವಿಜಯಪುರ ನಗರದ ಗಣೇಶ ಮೂರ್ತಿ ಉದ್ಯಮ ಮಂಕುಬಡಿದು ಕುಳಿತಿದೆ.
Related Articles
ಇತ್ತ ಪಾಲಿಕೆ ಅಧಿಕಾರಿಗಳು ಪರಿಸರದ ಹೆಸರಿನಲ್ಲಿ ಗಣೇಶ ಮೂರ್ತಿ ಉದ್ಯಮವನ್ನು ಮಾತ್ರ ನಿಯಂತ್ರಣದಲ್ಲಿ ಇಡಲು ಮುಂದಾಗುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸುತ್ತಿದೆ. ಪರಿಸರಕ್ಕೆ ಹಾನಿ ಆಗುವ ಎಲ್ಲ ಮೂರ್ತಿಗಳನ್ನು ಪಾಲಿಕೆ ನಿಷೇಧಿಸಿ, ಅಂಥ ಮಾರಾಟ ವ್ಯವಸ್ಥೆಯ ಮೇಲೂ ಸಂಪೂರ್ಣ
ನಿಯಂತ್ರಣ ಹೇರಬೇಕು. ಅಧಿಕಾರಿಗಳ ಕ್ರಮದಿಂದ ಗಣೇಶ ಮೂರ್ತಿ ತಯಾರಿಕೆ ಉದ್ಯಮವೇ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮೂರ್ತಿ ತಯಾರಿಕರ ಸಂಘದ ಅಧ್ಯಕ್ಷ ರಮೇಶ ಸುಗಂ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
Advertisement
ಹಳೆಯ ದಾಸ್ತಾನು: ಕಳೆದ ವರ್ಷ ಮಾರಾಟ ಆಗದೇ ಒಬ್ಬೊಬ್ಬ ವ್ಯಾಪಾರಿಗಳ ಬಳಿಯೂ ಲಕ್ಷಾಂತರ ರೂ. ಮೌಲ್ಯದ ಪಿಒಪಿ ಗಣೇಶ ಮೂರ್ತಿಗಳ ದಾಸ್ತಾನು ಇದೆ. ಹಿಂದಿನಂತೆ ಪರಿಸರ ಸ್ನೇಹಿ ಗಣೇಶ ಮೂರ್ತಿ ರೂಪಿಸಲು ಅಗತ್ಯ ಪ್ರಮಾಣದ ಮಣ್ಣು ಸಿಗುವುದಿಲ್ಲ. ರೈತರು ಗಣೇಶಮೂರ್ತಿ ತಯಾರಿಕೆಗೆ ಮಣ್ಣು ನೀಡಲು ನೀಡಲು ಮುಂದಾಗುವುದಿಲ್ಲ. ಪಾಲಿಕೆ ಅಧಿಕಾರಿಗಳು ಗಣೇಶ ಮೂರ್ತಿ ತಯಾರಕರ ಸಮಸ್ಯೆ ಅರಿಯಬೇಕಿತ್ತು. ಇದಕ್ಕೆ ಪರಿಹಾರ ಕ್ರಮ ಕೈಗೊಂಡ ಬಳಿಕ ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ನಿಷೇಧ ಹೇರಬೇಕಿತ್ತು ಎಂದು ನಾರಾಯಣ ಕಾಳೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ, ಬಳಕೆ ನಿಷೇಧಿಸಿದ ಕುರಿತು ಸಾಕಷ್ಟು ಸಮಯದ ಮೊದಲೇ ಜಾಗೃತಿಗಾಗಿ ಮಾಹಿತಿ ನೀಡಿದ್ದೇವೆ. ಅದರ ಹೊರತಾಗಿ ನಿಷೇಧ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದೇವೆ. ಹೀಗಾಗಿ
ಪರಿಸರಕ್ಕೆ ಹಾನಿಕಾರಕ ಗಣೇಶ ಮೂರ್ತಿ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ನಿರಂತರ ನಡೆಯಲಿದೆ. ಪರಿಸರಕ್ಕೆ ಹಾನಿಕಾರಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ವ್ಯಕ್ತಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ಹರ್ಷಾ ಶೆಟ್ಟಿ ಮಹಾನಗರ ಪಾಲಿಕೆ ಆಯುಕ್ತ, ವಿಜಯಪುರ