Advertisement

ಪಾರ್ಥಿವ್‌ಗೆ ಗಾಯ, ಆಫ್ರಿಕಾ ಪ್ರವಾಸಕ್ಕೆ ಅನುಮಾನ

07:25 AM Dec 12, 2017 | Team Udayavani |

ನವದೆಹಲಿ: ಗುಜರಾತ್‌ ರಣಜಿ ಕ್ರಿಕೆಟ್‌ ತಂಡದ ನಾಯಕ ಕಮ್‌ ವಿಕೆಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. 

Advertisement

ಪಾರ್ಥಿವ್‌ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡದ ಹೆಚ್ಚುವರಿ ವಿಕೆಟ್‌ಕೀಪರ್‌ ಆಗಿ ಆಯ್ಕೆಯಾಗಿದ್ದರು. ಸದ್ಯ ರಣಜಿ ಪಂದ್ಯವನ್ನು ಆಡುವ ವೇಳೆ ಕೈ ಬೆರಳಿನ ಗಾಯಕ್ಕೆ ತುತ್ತಾಗಿರುವ ಅವರು ಆಫ್ರಿಕಾ ಪ್ರವಾಸಕ್ಕೆ ತೆರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ತಂಡದ ಮೂಲಗಳ ಪ್ರಕಾರ ಇವರ ಗಾಯದ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ ಎನ್ನಲಾಗಿದೆ. ವೃದ್ದಿಮಾನ್‌ ಸಹಾ ವಿಕೆಟ್‌ ಕೀಪರ್‌ ಆಗಿ ಭಾರತ ತಂಡದ ಮೊದಲ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next