Advertisement

ಪಾರ್ಶ್ವನಾಥ ವಿಗ್ರಹ ಸ್ವಚ್ಛತಾ ಕಾರ್ಯ

05:48 PM Jan 14, 2022 | Team Udayavani |

ಮುದಗಲ್ಲ: ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಚರಂಡಿ ಪಕ್ಕದಲ್ಲಿದ್ದ 12ನೇ ಶತಮಾನಕ್ಕೆ ಸಂಬಂಧಿಸಿದ ಕರಿ ಕಲ್ಲಿನ ಜೈನರ ತೀರ್ಥಂಕರನಾದ ಪಾರ್ಶ್ವನಾಥ ವಿಗ್ರಹ, ನಂದಿ ವಿಗ್ರಹ ಸೇರಿದಂತೆ ವೀರ ಗಲ್ಲುಗಳು, ಮಾಸ್ತಿ ಕಲ್ಲುಗಳು ಹಾಗೂ ಸೂರ್ಯಪೀಠ, ತಳಕು ಹಾಕಿದ ನಾಗ ಶಿಲ್ಪಗಳು ಹಾಗೂ ವ್ಯಕ್ತಿ ಆನೆಯೊಂದಿಗೆ ಸೆಣಸುವುದು, ನಟ ರಾಜ ಶಿಲ್ಪ, ವಿಷ್ಣು ಶಿಲ್ಪ, ಮಹಾಸತಿ ಗಲ್ಲು ಜತೆ ಪಾರ್ಶ್ವನಾಥ ವಿಗ್ರಹಗಳನ್ನು ರಕ್ಷಣೆ ಮಾಡಲಾಗಿದೆ.

Advertisement

ಆರಂಭದಲ್ಲಿ ದಕ್ಷಿಣಕ್ಕೆ ಪುರಸಭೆ ಮುಖ್ಯದ್ವಾರವಿದ್ದಾಗ ಅದರ ಹಿಂಬದಿಯಲ್ಲಿ ಈ ವಿಗ್ರಹಗಳನ್ನು ಇಡಲಾಗಿತ್ತು. ಪುರಸಭೆ ಉತ್ತರ ದಿಕ್ಕಿಗೆ ನಿರ್ಮಾಣವಾದಾಗ ಇದೇ ವಿಗ್ರಹಗಳನ್ನು ಪಾರ್ಕ್‌ ಜಾಗದಲ್ಲಿ ಸಂಗ್ರಹಿಸಲಾಗಿತ್ತು. ಆದರೆ, ಈ ಜಾಗವು ರಸ್ತೆಯಲ್ಲಿ ತೆರವುಗೊಂಡಾಗ ಮಣ್ಣಲ್ಲಿ ಹೂತು ಹೋಗುತ್ತಿದ್ದ ಪ್ರಾಚೀನ ವಿಗ್ರಹಗಳನ್ನು ಪಟ್ಟಣದ ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಹಿಂದೂ ಜಾಗರಣೆ ವೇದಿಕೆ ಹಾಗೂ ಜೈ ಭೀಮ್‌ ಯುವ ಘರ್ಜನೆ ಸೇವಾ ಸಂಸ್ಥೆ ಹಾಗೂ ಯುವ ಬ್ರಿಗೇಡ್‌ ವತಿಯಿಂದ ಎಲ್ಲವೂಗಳನ್ನು ಒಂದಡೆ ಸೇರಿಸಿ ಸ್ವತ್ಛಗೊಳಿಸಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next