Advertisement

ಸಂಸತ್‌ ಅಧಿವೇಶನ ಬುಧವಾರಕ್ಕೆ ಅಂತ್ಯ?

12:24 AM Sep 20, 2020 | mahesh |

ಹೊಸದಿಲ್ಲಿ: ಕೋವಿಡ್ ಕಾರಣದಿಂದಾಗಿ ಸಂಸತ್‌ ಅಧಿವೇಶನ ಬುಧವಾರಕ್ಕೇ ಅಂತ್ಯವಾಗುವ ಸಾಧ್ಯತೆ ಇದೆ. ಕೇಂದ್ರ ಸಚಿವರು, ಸಂಸದರು ಮತ್ತು ಸಿಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧದಲ್ಲೇ ಅಧಿವೇಶನ ಮೊಟಕುಗೊಳಿಸಲು ನಿರ್ಧರಿಸಲಾಗಿದೆ. ಶನಿವಾರ ಸಂಜೆ ಸ್ಪೀಕರ್‌ ಓಂಬಿರ್ಲಾ ಅವರ ನೇತೃತ್ವದಲ್ಲಿ ನಡೆದ ಲೋಕಸಭೆಯ ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಈ ವೇಳೆ ಬಹುತೇಕ ರಾಜಕೀಯ ಪಕ್ಷಗಳು ಅಧಿವೇಶನವನ್ನು ಮೊಟಕುಗೊಳಿಸಲು ಸಹಮತ ವ್ಯಕ್ತಪಡಿಸಿವೆ.

Advertisement

ಅಧಿವೇಶನ ಅ. 1ರ ವರೆಗೆ ನಡೆಯ ಬೇಕಿತ್ತು. ಸದ್ಯ ಕೃಷಿ ಸಂಬಂಧಿ 3 ಅಧ್ಯಾ ದೇಶಗಳನ್ನು ಕೇಂದ್ರ ಸರಕಾರ ಮಸೂದೆಯಾಗಿ ಮಾರ್ಪಡಿಸಬೇಕಾಗಿದೆ. ಲೋಕಸಭೆಯಲ್ಲಿ ಇವು ಪಾಸಾಗಿದ್ದು, ರವಿವಾರ ರಾಜ್ಯಸಭೆ ಮುಂದೆ ಬರಲಿವೆ. ಅಲ್ಲದೆ ಇನ್ನೂ ಕೆಲವು ಮಹತ್ವದ ಅಧ್ಯಾದೇಶ ಗಳಿದ್ದು, ಅವುಗಳಿಗೆ ಬುಧವಾರದೊಳಗೆ ಅನುಮೋದನೆ ಪಡೆದು ಮುಂದೂಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next