Advertisement

ರಸ್ತೆಯಲ್ಲೇ ಪಾರ್ಕಿಂಗ್‌: ಸಾರ್ವಜನಿಕರ ಪರದಾಟ

11:28 PM Sep 20, 2019 | Sriram |

ಉಡುಪಿ: ಜಿಲ್ಲೆಯಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ.
ಮಣಿಪಾಲದಿಂದ ಅಲೆವೂರು ಸಂಪರ್ಕಿಸುವ ರಸ್ತೆ ಮತ್ತು ಎಂ.ಜೆ. ಸಿ.ಯಿಂದ ಬರುವ ರಸ್ತೆ ಮೂರು ಕಡೆಗಳಿಂದ ಕೂಡುತ್ತವೆ. ಈ ಭಾಗದಲ್ಲಿಯೇ ಬಿಎಸ್‌ಎನ್‌ ಎಲ್‌ ಕಚೇರಿ , ಸಿಂಡಿಕೇಟ್‌ ಬ್ಯಾಂಕಿನ ಮುಖ್ಯ ಕಚೇರಿ ಇವೆ. ಈ ರಸ್ತೆಯಲ್ಲಿ ಬಸ್‌, ಕಾರು, ದ್ವಿಚಕ್ರ ವಾಹನಗಳನ್ನು ರಸ್ತೆಗೆ ಹೊಂದಿಕೊಂಡೇ ನಿಲ್ಲಿಸುವುದರಿಂದ ವಾಹನಗಳ ಸರಾಗ ಓಡಾಟಕ್ಕೆ ಅಡಚಣೆಯಾಗುತ್ತಿದೆ.

Advertisement

ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ಮೂರು ಕಡೆಗಳಿಂದ ವಾಹನಗಳು ನುಗ್ಗಿ ಬರುವಾಗ ಗೊಂದಲದಿಂದಾಗಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಈ ಕಚೇರಿಯ ಇನ್ನೊಂದು ಬದಿಗೆ ತಿರುವು ಕೂಡ ಇದೆ. ತಿರುವಿನಿಂದ ಸಂಚರಿಸುವ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಪಾರ್ಕ್‌ ಮಾಡಿದ ವಾಹನಗಳಿಂದ ತೊಂದರೆ ಉಂಟಾಗುತ್ತಿದೆ.

ಇದರೊಂದಿಗೆ ಅಪಘಾತ ಸಂಭವಿಸುವ ಸಾಧ್ಯತೆಗಳು ಕೂಡ ಹೆಚ್ಚು. ಇದರ ಪಕ್ಕದಲ್ಲೆ ಶಾಲೆ ಇರುವುದರಿಂದ ಮಕ್ಕಳಿಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಗೆ ಅನುಕೂಲ ಕಲ್ಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next