Advertisement

Assault: ಪಾರ್ಕಿಂಗ್‌ ವಿವಾದ: ಹಲ್ಲೆ, ಜೀವ ಬೆದರಿಕೆ

12:29 AM Aug 13, 2023 | Team Udayavani |

ಉಡುಪಿ: ಪಾರ್ಕಿಂಗ್‌ ವಿಚಾರಕ್ಕೆ ಪರಸ್ಪರ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

Advertisement

ಮಟ್ಟುವಿನ ಪ್ರಶಾಂತ್‌ ಜೆ. ಕುಮಾರ್‌ ಅವರು ಸಂತೆಕಟ್ಟೆಯ ಮೆಡಿಕಲ್‌ ಎದುರು ಬೈಕ್‌ ನಿಲ್ಲಿಸುವಾಗ ಕಾರಿನಲ್ಲಿ ಬಂದ ವ್ಯಕ್ತಿ ಬೈಕ್‌ ಮುಂದಕ್ಕೆ ಇಡುವಂತೆ ತಿಳಿಸಿದ್ದಾನೆ. ಅದರಂತೆ ಅವರು ಮುಂದೆ ನಿಲ್ಲಿಸಿ ಮೆಡಿಕಲ್‌ಗೆ ತೆರಳಿ ಹಿಂದಕ್ಕೆ ಬಂದಾಗ ಆರೋಪಿ ಹಾಗೂ ಆತನ ಪತ್ನಿ ಪ್ರಶಾಂತ್‌ ಅವರನ್ನು ತಡೆದು ಯಾವುದೋ ಆಯುಧದಿಂದ ತಲೆಯ ಹಿಂಬದಿಗೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next