Advertisement

ಪರ್ಕಳ ರಾ. ಹೆ. ಕಾಮಗಾರಿ ಪರಿಶೀಲನೆ

12:21 PM Apr 14, 2022 | Team Udayavani |

ಉಡುಪಿ: ಉಡುಪಿ- ಮಣಿಪಾಲ – ಪರ್ಕಳ ಮುಖ್ಯ ರಸ್ತೆ (ರಾ. ಹೆ. 160ಎ) ಕಾಮಗಾರಿ ಪ್ರಗತಿ ಯಲ್ಲಿದ್ದು, ಶಾಸಕ ಕೆ. ರಘುಪತಿ ಭಟ್‌ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. ಯಾವುದೆ ರೀತಿಯ ಅಡಚಣೆ ಇಲ್ಲದೆ ಕಾಮಗಾರಿ ಮುಂದುವರಿಯಲಿದೆ ಎಂದು ತಿಳಿಸಿದರು.

Advertisement

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಸದಸ್ಯರಾದ ಮಂಜುನಾಥ್‌ ಮಣಿಪಾಲ್‌, ಪೌರಾಯುಕ್ತ ಡಾ| ಉದಯಕುಮಾರ್‌ ಶೆಟ್ಟಿ, ಎಇಇ ಯಶವಂತ್‌, ತಹಶೀಲ್ದಾರ್‌ ಅರ್ಚನಾ ಭಟ್‌, ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳಾದ ನಾಗರಾಜ್‌ ನಾಯ್ಕ, ಮಂಜುನಾಥ್‌ ನಾಯ್ಕ ಮೊದಲಾದವರಿದ್ದರು.

ಸ್ಥಳ ಪರಿಶೀಲನೆ, ಅಧಿಕಾರಿಗಳೊಂದಿಗೆ ಚರ್ಚೆ

ಉಡುಪಿ- ಮಣಿಪಾಲ ರಸ್ತೆಯ ಲಕ್ಷ್ಮೀಂದ್ರ ನಗರದಲ್ಲಿ ಯು-ಟರ್ನ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರಿಂದ ಬಂದಿರುವ ದೂರಿನಂತೆ ಶಾಸಕ ರಘುಪತಿ ಭಟ್‌ ಅವರು ಬುಧವಾರ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳ ಜತೆ ಮಾತುಕತೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next