Advertisement

ಲಿಂಗಪಾಡಿಯಲ್ಲಿ ಪರಿಸರಪ್ರಿಯ ಶಿವ!

02:18 PM Feb 25, 2017 | Team Udayavani |

ಉಡುಪಿ: ಪರ್ಕಳ ದೇವಿ ನಗರ 2 ನೇ ಪ್ರಮುಖ ರಸ್ತೆಯ ಕೊನೆಯಲ್ಲಿ ಹೊರಜಗತ್ತಿಗೆ ತಿಳಿಯದ ಲಿಂಗವೊಂದು ಶಿವಾಲಯವಾಗದೆ ಉಳಿದಿದೆ. ಲಿಂಗವು ಹಿಂದೆ ಹೆಗ್ಡೆ ಮನೆತನಕ್ಕೆ ಸೇರಿತ್ತು ಎಂದು ಸ್ಥಳೀಯರು ಹೇಳುತ್ತಾರೆ.  ಇತ್ತೀಚಿನ ದಿನಗಳಲ್ಲಿ  ಸುತ್ತಮುತ್ತಲು ವಸತಿ ಸಮುಚ್ಚಯಗಳು ತಲೆಯೆತ್ತಿ ನಿಂತರೂ ಲಿಂಗ ಹಾಗೆಯೇ ಇದೆ. ಶಿವಲಿಂಗದ ಎದುರು ದೊಡ್ಡ ಕೆರೆ ಇದೆ. ಒಂದರ್ಥದಲ್ಲಿ ಪ್ರಕೃತಿಪ್ರಿಯನಾದ ಶಿವ ಆಧುನಿಕ ಸ್ವರೂಪದ ಮಂದಿರದಲ್ಲಿರುವುದಕ್ಕಿಂತ ಸುಂದರವಾಗಿ ಕಾಣುತ್ತಾನೆ. ಶಿವರಾತ್ರಿಯಂದು ಪರ್ಕಳದ ಶ್ರೀಕೇಶವಾನಂದ ಸ್ವಾಮೀಜಿ ಸ್ಥಳಕ್ಕೆ ಭೇಟಿ ನೀಡಿ ಜಲಾಭಿಷೇಕ ನೆರವೇರಿಸಿದರು. ಈ ಸಂದರ್ಭ ತಿಮ್ಮಪ್ಪಶೆಟ್ಟಿ ಶೆಟ್ಟಿಬೆಟ್ಟು, ಉದ್ಯಮಿ ಸುಧೀರ್‌ ಶೆಟ್ಟಿ, ಗಣೇಶ್‌ ರಾಜ್‌ ಸರಳೇಬೆಟ್ಟು ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next