Advertisement

Paris Olympics: ಸೋತವರನ್ನೂ ಗೌರವಿಸಿ, ಹುರಿದುಂಬಿಸಿ: ತಜ್ಞ ಕೋಚ್‌ ಸಲಹೆ

01:24 AM Aug 12, 2024 | Team Udayavani |

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಯ ಬಗ್ಗೆ ಭಾರತ ಕ್ರೀಡಾ ಪ್ರಾಧಿಕಾರದ ಮಾಜಿ ಮುಖ್ಯ ಕೋಚ್‌ ಡಾ| ಲಕ್ಷ್ಮೀಶ.ವೈ.ಎಸ್‌. ಅವರು ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. ಕಳೆದ ಬಾರಿಗಿಂತ ಪದಕಗಳ ಸಂಖ್ಯೆ ಕಡಿಮೆ ಯಾದರೂ ಸಹ ಭಾರತದ ಸ್ಪರ್ಧಿಗಳು ವಿಶ್ವದ ಗಮನ ಸೆಳೆದಿದ್ದಾರೆ ಎಂದು ಅವರು ಹೇಳಿದ್ದಾರೆ.

Advertisement

ಪ್ಯಾರಿಸ್‌ ಭೇಟಿ ಬಳಿಕ “ಉದಯವಾಣಿ’ಯ ಜೊತೆ ಮಾತನಾಡಿದ ಅವರು, ಕ್ರೀಡೆಯ ಪ್ರಮುಖ ಉದ್ದೇಶವೇ ಆರೋಗ್ಯ ಎಂಬುದಾಗಿದೆ. ಒಲಿಂಪಿಕ್ಸ್‌ ನ ಧ್ಯೇಯವಾಕ್ಯ ಸಹ ಇದೇ ಆಗಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದ್ದರೆ, ಕ್ರೀಡೆ ಗಳಲ್ಲಿ ಭಾಗಿಯಾಗಬೇಕು. ಇವರೆಡೂ ಒಂದೇ ನಾಣ್ಯದ 2 ಮುಖಗಳಿದ್ದಂತೆ. ಇವುಗಳನ್ನು ಸಾಧಿ ಸಲು ಎಲ್ಲರಿಗೂ ಅನುಕೂಲವಾಗುವಂತೆ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಅವರು ಅಭಿ ಪ್ರಾಯ ವ್ಯಕ್ತಪಡಿಸಿದರು.

ಪದಕವಷ್ಟೇ ಗೆಲುವಲ್ಲ:
ಒಲಿಂಪಿಕ್ಸ್‌ ಕ್ರೀಡಾಕೂಟ ಗಳಲ್ಲಿ ಪದಕ ಗೆಲ್ಲುವುದು ವಿಶ್ವದ 2 ಕೋಟಿ ಕ್ರೀಡಾ ಪಟುಗಳದ್ದೂ ಗುರಿಯಾಗಿರುತ್ತದೆ. ಹೀಗಾಗಿ ಪದಕ ಗೆದ್ದವರನ್ನಷ್ಟೇ ಸಂಭ್ರಮಿಸಿದರೆ, ಉಳಿದವರಿಗೆ ಆತ್ಮ ವಿಶ್ವಾಸವನ್ನು ಕುಂದಿಸಿದಂತಾ­ಗುತ್ತದೆ. ಕ್ರೀಡೆಯಲ್ಲಿ ಪ್ರಮುಖವಾಗಿರುವುದು ಭಾಗವಹಿಸುವಿಕೆ; ಭಾಗಿ ಯಾದವರೆಲ್ಲರಿಗೂ ಗೌರವ ಸಿಗಬೇಕು ಎಂದರು.

ಹೆಚ್ಚೆಚ್ಚು ಭಾಗಿ ಆಗಲಿ:
ಭಾರತದಲ್ಲಿ ಪ್ರತಿಭೆ ಇರುವವರಿಗೇನೂ ಕಡಿಮೆ ಇಲ್ಲ. ಆದರೆ ಇವರನ್ನು ಗುರುತಿಸುವ ಸರಿಯಾದ ವ್ಯವಸ್ಥೆ ರೂಪುಗೊಳ್ಳ ಬೇಕು. ಇವರಿಗೆ ಮುಖ್ಯವಾಗಿ ಗಟ್ಟಿಯಾದ ತಳ ಪಾಯವನ್ನು ರೂಪಿಸಿಕೊಡಬೇಕು. ಪದಕ ಕಡಿಮೆ ಯಾದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಭಾರತ 16 ಕ್ರೀಡೆಗಳಲ್ಲಿ ಮಾತ್ರ ಈ ಬಾರಿ ಭಾಗಿ ಯಾಗಿದೆ. ಎಷ್ಟೋ ಕ್ರೀಡೆಗಳಲ್ಲಿ ಭಾರತಕ್ಕೆ ಅರ್ಹತೆ ಸಿಕ್ಕಿಲ್ಲ. ಇಂತಹ ಸಮಸ್ಯೆಗಳನ್ನು ತೊಡೆಯುವತ್ತ ಗಮನ ಹರಿಸಬೇಕು. ಭಾಗವಹಿ ಸುವವರ ಸಂಖ್ಯೆ ಹೆಚ್ಚಾದರೆ ಪದಕದ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಕ್ರೀಡಾ ಜಾಗೃತಿ ಅಗತ್ಯ:
ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಬೇಕು, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂಬ ಅರಿವನ್ನು ಸಮಾಜದಲ್ಲಿ ಮೂಡಿಸುವಲ್ಲಿ ವ್ಯವಸ್ಥೆ ವಿಫ‌ಲವಾಗಿದೆ. ಮಕ್ಕಳು ಹೆಚ್ಚು ಅಂಕ ಗಳಿಸಿ, ಸಾಫ್ಟ್ ವೇರ್‌ ಹುದ್ದೆ ಸೇರಲಿ ಎಂದೇ ಬಹುತೇಕರು ಬಯಸುತ್ತಾರೆ. ಈ ಬಗ್ಗೆ ಅರಿವನ್ನು ಹೆಚ್ಚು ಮಾಡಿದರೆ ಕ್ರೀಡಾಳುಗಳ ಸಂಖ್ಯೆಯೂ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಪ್ಪು ಕಲ್ಪನೆ ದೂರವಾಗಬೇಕು:
ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬಹುದು ಎಂಬ ಅರಿವು ಭಾರತದಲ್ಲಿ ತುಂಬಾ ಜನರಿಗಿಲ್ಲ. ಕ್ರೀಡೆಯಲ್ಲಿ ಮಹತ್ತರವಾದುದನ್ನು ಸಾಧಿಸಲು ಸಾಧ್ಯವಿಲ್ಲ. ಇದರ ಬದಲು ಇತರೆ ಕ್ಷೇತ್ರಗಳನ್ನು ಆಯ್ದು ಕೊಂಡರೆ ಉತ್ತಮ ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಇದು ಬದಲಾಗಬೇಕು. ಆಟವಾಡಿ ಕೈ ಕಾಲು ಮುರಿದುಕೊಂಡರೆ ಜೀವನ ಕಷ್ಟವಾಗುತ್ತದೆ ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಇದನ್ನು ಬಗೆಹರಿಸುವಂತಹ ವ್ಯವಸ್ಥೆ ರೂಪುಗೊಂಡರೆ ಕ್ರೀಡಾಪಟುಗಳ ಸಂಖ್ಯೆ ಹೆಚ್ಚುತ್ತದೆ ಎಂದರು.

ಆಟ ಕಡ್ಡಾಯ ಮಾಡಿ:
ಈ ಮೊದಲಿಗೆ ಹೋಲಿಸಿದರೆ ಭಾರತದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಖೇಲೋ ಇಂಡಿಯಾದಂತಹ ಕಾರ್ಯಕ್ರಮಗಳನ್ನು ಹಲವು ಕ್ರೀಡಾಪಟುಗಳಿಗೆ ಅವಕಾಶವನ್ನು ಒದಗಿಸಿದೆ. ಆದರೆ ಪ್ರತಿಮಗುವಿಗೂ ಆಟಕ್ಕೆ ಸಮಯ ಮತ್ತು ಅವಕಾಶ ಒದಗಿಸುವಂತಹ ನೀತಿಗಳನ್ನು ರೂಪಿಸುವುದು ಬಾಕಿಯಿದೆ. ಶಾಲಾ ಮಟ್ಟ ದಿಂದಲೇ ಇವುಗಳನ್ನು ಕಡ್ಡಾಯವಾಗಿ ಜಾರಿ ಮಾಡಬೇಕಿದೆ ಎಂದು ಹೇಳಿದರು.

 

– ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next