Advertisement

ಪಾರೆಸ್ಥಾನ ಶ್ರೀಕ್ಷೇತ್ರ ಕಳಿಯಾಟ ಮಹೋತ್ಸವ ಸಂಪನ್ನ

09:35 AM Apr 09, 2018 | Karthik A |

ಕುಂಬಳೆ: ಕುಂಬಳೆ ಬಳಿಯ ಅರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರದ ಕಳಿಯಾಟ ಮಹೋತ್ಸವವು ಸಂಪನ್ನಗೊಂಡಿತು. ಎ. 6ರಂದು ಬೆಳಗ್ಗೆ ಪೀಯಾಯಿ, ಆಲಿ ಭೂತ, ಮಲಯಾಂ ಚಾಮುಂಡಿ ದೈವದ ಕೋಲ, ವೀರಪುತ್ರನ್‌ ದೈವದ ಕೋಲ, ಸಂಜೆ ಭಗವತೀ ದರ್ಶನ, ಕೆಂಡಸೇವೆ, ಬಿಂಬದರ್ಶನ, ಪಾಡಾರ್‌ಕುಳಙರ ಭಗವತೀ (ಹೂಮುಡಿ) ಮಂತ್ರಮೂರ್ತಿ, ಆಲಿಭೂತ, ಕಲಶ ಪ್ರದಕ್ಷಿಣೆ ನಡೆಯಿತು. ಧ್ವಜಾವರೋಹಣ, ಪ್ರಸಾದ ವಿತರಣೆಯ ಬಳಿಕ ಉತ್ಸವಮೂರ್ತಿ, ಧ್ವಜ, ತಿರುವಾಯುಧ, ಛತ್ರ, ಚಾಮರಗಳೊಂದಿಗೆ ವಾದ್ಯ ಘೋಷದೊಂದಿಗೆ ಭಂಡಾರ ಮನೆಗೆ ಭಂಡಾರ ಮರಳಿದ ಬಳಿಕ ಭೂರಿ ಭೋಜನದೊಂದಿಗೆ ಉತ್ಸವ ಸಂಪನ್ನಗೊಂಡಿತು.

Advertisement

ಚಿತ್ರ : ಋತಿಕ್‌ ದೀಪಕ್‌

Advertisement

Udayavani is now on Telegram. Click here to join our channel and stay updated with the latest news.

Next