Advertisement

ಶಾಲಾ ಗೃಹಮಂತ್ರಿ ಕರೆಗೆ ಓಗೊಟ್ಟ ರಾಜ್ಯ ಗೃಹಮಂತ್ರಿ; ಹಾರಾಡಿಗೆ ಭೇಟಿ

06:39 PM Jan 12, 2017 | Sharanya Alva |

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಹಾರಾಡಿ ಸರ್ಕಾರಿ ಶಾಲೆಯ ಗೃಹ ಮಂತ್ರಿ ದಿವಿತ್ ರೈ ಕರೆಗೆ ಓಗೊಟ್ಟಿರುವ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರು ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ್ದಾರೆ.

Advertisement

ಹಾರಾಡಿ ಶಾಲೆಯಿಂದ ಹೆಚ್ಚುವರಿ ಶಿಕ್ಷಕರಾಗಿ ವರ್ಗಾವಣೆಗೊಂಡ ನಾಲ್ವರು ಶಿಕ್ಷಕರನ್ನು ವರ್ಗಾವಣೆ ಮಾಡಬಾರದೆಂದು 8ನೇ ತರಗತಿ ವಿದ್ಯಾರ್ಥಿ ದಿವಿತ್ ರೈ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದ. ಅದರಂತೆ ಜುಲೈ 19ರಂದು ದಿವಿತ್ ಗೆ ಕರೆ ಮಾಡಿದ್ದ ಸಚಿವರು ವರ್ಗಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು.

ಸಚಿವರು ನೀಡಿದ ಭರವಸೆಯಂತೆ ಹಾರಾಡಿ ಶಾಲೆಯ ಶಿಕ್ಷಕಿಯರಾದ ಶುಭಲತಾ, ಯಶೋಧಾ, ವಿಜಯಾ ಮತ್ತು ಲಿಲ್ಲಿ ಡಿಸೋಜಾ ಅವರನ್ನು ವರ್ಗಾವಣೆಗೊಳಿಸದಂತೆ ತಡೆದಿದ್ದರು. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next