Advertisement

ಪರಮೇಶ್ವರ್‌ ಅವರೇ ತುಮಕೂರಿಗೆ ಕರೆದರು : ಉರಿವ ಬೆಂಕಿಗೆ ಎಚ್‌ಡಿಡಿ ತುಪ್ಪ

09:55 AM Mar 26, 2019 | Team Udayavani |

ತುಮಕೂರು: ನನ್ನನ್ನು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಸಿಎಂ ಪರಮೇಶ್ವರ್‌ ಅವರು ಒತ್ತಾಯ ಮಾಡಿದ್ದರು ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷದಲ್ಲಿ ಎದ್ದಿರುವ ಬಂಡಾಯದ ಬೆಂಕಿಗೆ ತುಪ್ಪ ಸುರಿದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಡಿ ಅವರು ನಾಳೆ ಮಧ್ಯಾಹ್ನ 2.15 ಕ್ಕೆ ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ತುಮಕೂರು ಕ್ಷೇತ್ರವನ್ನು ಮೈತ್ರಿ ಒಪ್ಪಂದದ ಅನ್ವಯ ಕಾಂಗ್ರೆಸ್‌ ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವ ವಿರುದ್ಧ ಕಾಂಗ್ರೆಸ್‌ ಹಾಲಿ ಸಂಸದ ಮುದ್ದು ಹನುಮೇಗೌಡ, ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಸಿಡಿದೆದ್ದಿದ್ದು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಮುದ್ದುಹನುಮೇ ಗೌಡರೊಂದಿಗೆ ನಾನು ಮಾತನಾಡುತ್ತೇನೆ

ಸಂಸದ ಮುದ್ದುಹನುಮೇಗೌಡರೊಂದಿಗೆ ನಾನು ಮಾತುಕತೆ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next