Advertisement

ಪೂರ್ವ ಸಮೀಕ್ಷೆ ಆರೋಪಕ್ಕೆ ಪರಂ ಸ್ಪಷ್ಟನೆ

11:42 AM Jan 14, 2018 | |

ಬೆಂಗಳೂರು: ಸಿಎಚ್‌ಎಸ್‌ ಎಂಬ ಖಾಸಗಿ ಸಂಸ್ಥೆಯು ಮುಂಬರುವ ರಾಜ್ಯ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆ ಮಾಡಿ ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ಸಮೀಕ್ಷೆ ಮಾಡಲಾಗಿದೆ ಎಂದು ಹೇಳಿಕೊಂಡಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ಈ ಸಂಸ್ಥೆಗೆ ನಾವು ಯಾವುದೇ ಸಮೀಕ್ಷೆ ಮಾಡಲು ಅನುಮತಿ ಕೊಟ್ಟಿಲ್ಲ. ನಮ್ಮ ಪಕ್ಷಕ್ಕೂ  ಈ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಚುನಾವಣಾ ವೇಳೆ ಇಂತಹ ಅಪಪ್ರಚಾರಗಳನ್ನು ಸ್ವ ಹಿತಾಸಕ್ತಿಗಳು ಹಬ್ಬಿಸುತ್ತವೆ. ಇಂತಹ ಸಂಸ್ಥೆಗಳ ವಿರುದ್ಧ ಪಕ್ಷದ ವತಿಯಿಂದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next