Advertisement

Khalistan: ಪನ್ನು ಹತ್ಯೆ ಸಂಚು- ಆರೋಪಿಯ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌

09:37 PM Jan 04, 2024 | Team Udayavani |

ನವದೆಹಲಿ: ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆಗೆ ಸಂಚು ರೂಪಿಸಿ ವಿಫ‌ಲವಾಗಿ, ಜೆಕ್‌ ಗಣರಾಜ್ಯದಲ್ಲಿ ಬಂಧಿತನಾಗಿರುವ ಭಾರತೀಯ ಪ್ರಜೆ ನಿಖೀಲ್‌ ಗುಪ್ತಾ ಪರವಾಗಿ ರಾಜತಾಂತ್ರಿಕ ಭೇಟಿಗೆ ಅವಕಾಶ ಕೋರಿ, ಸಲ್ಲಿಸಲಾ ಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

Advertisement

ನಿಖೀಲ್‌ ಪರವಾಗಿ ಆತನ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿಯಲ್ಲಿ, ವಿದೇಶಿ ನೆಲದಲ್ಲಿ ತನ್ನ ತಪ್ಪಿಲ್ಲವೆಂದು ನಿರೂಪಿಸಿಕೊಳ್ಳಲು ಭಾರತೀಯ ರಾಜತಾಂತ್ರಿಕರ ಭೇಟಿಗಾದರೂ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಲಾಗಿತ್ತು. ಆದರೆ, ಅರ್ಜಿ ತಿರಸ್ಕರಿಸಿ ರುವ ಸುಪ್ರೀಂ ಕೋರ್ಟ್‌, “ಈಗಾಗಲೇ ವಿಯೆನ್ನಾ ಒಪ್ಪಂದದ ಅನ್ವಯ ನಿಖೀಲ್‌ ರಾಜತಾಂತ್ರಿಕ ಭೇಟಿ ಅವಕಾಶ ಪಡೆದುಕೊಂಡಿದ್ದಾರೆ. ಹೀಗಿದ್ದಾಗ ಈ ವಿಚಾರದಲ್ಲಿ ನಾವು ಮಾಡುವಂಥದ್ದು ಏನೂ ಇಲ್ಲ. ವಿದೇಶಿ ನ್ಯಾಯಾಲಯದ ಕಾನೂನು ವ್ಯಾಪ್ತಿ , ಸಮಗ್ರತೆ ಮತ್ತು ಆ ನೆಲದ ಕಾನೂನನ್ನು ನಾವು ಗೌರವಿಸಬೇಕಿದೆ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next