Advertisement

ಪಂಜಿಮಾರು: ಮನೆಗೆ ಸಿಡಿಲು ಬಡಿದು ಹಾನಿ

01:20 PM Jun 15, 2019 | Team Udayavani |

ಶಿರ್ವ: ಕಟಪಾಡಿ-ಶಿರ್ವ ಮುಖ್ಯರಸ್ತೆಯ ಪಂಜಿಮಾರು ಫಲ್ಕೆ ಗಿಲ್ಬರ್ಟ್‌ ಡಿ’ಸೋಜಾ ಅವರ ಮನೆಗೆ ಬುಧವಾರ ರಾತ್ರಿ 11.30ರ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.

Advertisement

ಸಿಡಿಲಿನ ರಭಸಕ್ಕೆ ಮನೆಯ ಮನೆಯ ಫ್ಯಾನ್‌ಗಳು,ವಿದ್ಯುತ್‌ ಮೀಟರ್‌, ಸ್ವಿಚ್‌ ಬೋರ್ಡ್‌ ಹಾಗೂ ವಿದ್ಯುತ್‌ ಪಂಪ್‌ನ ಸ್ಟಾರ್ಟರ್‌ಸುಟ್ಟು ಹೋಗಿದೆ . ಮನೆಯ ಮೇಲ್ಛಾವಣಿಯ ಗೋಡೆ ಒಡೆದು ಬಿರುಕು ಬಿಟ್ಟಿದೆ. ಮನೆಯ ವಿದ್ಯುತ್‌ ವಯರಿಂಗ್‌ ಸಂಪೂರ್ಣಸುಟ್ಟು ಹೋಗಿದ್ದು ವಿದ್ಯುತ್‌ ಉಪಕರಣಗಳು ಪುಡಿ ಪುಡಿಯಾಗಿ ಸುಮಾರು 2 ಲಕ್ಷ ರೂ.ಹಾನಿ ಸಂಭವಿಸಿದೆ. ಮನೆಯ ಕೆಳಅಂತಸ್ತಿನಲ್ಲಿ ತಂದೆ, ತಾಯಿ ಮಲಗಿದ್ದರು. ಮಹಡಿಯಲ್ಲಿ ಮಗ, ಸೊಸೆ ಮತ್ತು ಮಗು ಮಲಗಿದ್ದ ಕೋಣೆಗೆ ಸಿಡಿಲು ಬಿದ್ದಿದ್ದು ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಕಾಪು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಅವರ ನಿರ್ದೇಶನದ ಮೇರೆಗೆ ಶಿರ್ವ ಗ್ರಾಮ ಕರಣಿಕ ವಿಜಯ್‌ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಿರ್ವ ಗ್ರಾ.ಪಂ. ಸದಸ್ಯ ಕೆ.ಆರ್‌.ಪಾಟ್ಕರ್‌, ವೈಲೆಟ್‌ ಕ್ಯಾಸ್ತಲಿನೊ ಮತ್ತಿತರ ಮುಖಂಡರು ಮನೆಗೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next