Advertisement

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

01:02 AM Sep 30, 2024 | Team Udayavani |

ಸುಳ್ಯ: ಪಂಜ – ಗುತ್ತಿಗಾರು ರಸ್ತೆಯ ಜಳಕದಹೊಳೆ ಎಂಬಲ್ಲಿ ಶನಿವಾರ ರಾತ್ರಿ ಕಡವೆಯೊಂದು ಬೈಕ್‌ ಮೇಲೆ ಜಿಗಿದು ಸವಾರ ಬೇರ್ಯ ತಿರುಮಲೇಶ್ವರ ಗಾಯಗೊಂಡಿದ್ದಾರೆ.

Advertisement

ಅವರ ಕೈ ಕಾಲು, ಭುಜದ ಭಾಗಕ್ಕೆ ತೀವ್ರ ಗಾಯವಾಗಿದ್ದು ಕಡಬದ ಆಸ್ಪತ್ರೆಗೊಯ್ಯಲಾಗಿದೆ.

ಪಂಜ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಜ, ಸುಬ್ರಹ್ಮಣ್ಯ ಪರಿಸರದ ಅರಣ್ಯ ಪ್ರದೇಶಗಳಲ್ಲಿ ಕಡವೆ, ಕಾಡುಕೋಣ, ಕಾಡಾನೆ ಇನ್ನಿತರ ಕಾಡುಪ್ರಾಣಿಗಳು ಆಗಾಗ್ಗೆ ಕಾಣಿಕೊಳ್ಳುತ್ತಿವೆ. ಕೃಷಿ ತೋಟಕ್ಕೂ ಲಗ್ಗೆ ಇಡುತ್ತಿವೆ. ಕಾಡುಕೋಣ, ಕಡವೆ ರಸ್ತೆಗೆ ಜಿಗಿದು ರಸ್ತೆ ದಾಟುವುದು ಕೆಲವೊಮ್ಮೆ ಕಂಡುಬರುತ್ತದೆ.

ಕೆಲವು ವರ್ಷದ ಹಿಂದೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಕಡವೆಯೊಂದು ಚಲಿಸುತ್ತಿದ್ದ ಬೈಕ್‌ ಮೇಲೆ ಜಿಗಿದು ಬೈಕ್‌ ಸವಾರರೊಬ್ಬರು ಮೃತರಾಗಿದ್ದ ಘಟನೆ ಸಂಭವಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next