Advertisement

ಸ್ವಚ್ಛ ಭಾರತ ಸಂದೇಶ ಸಾರುವ ಪಾಂಗಾಳ ಪ್ರಯಾಣಿಕರ ತಂಗುದಾಣ

05:19 PM Mar 26, 2019 | keerthan |

ಕಟಪಾಡಿ: ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಟಪಾಡಿ ಬಳಿಯ ಪಾಂಗಾಳ ಎಂಬಲ್ಲಿ ನೂತನ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಿದೆ. ವಿಶೇಷವೇನೆಂದರೆ ಈ ತಂಗುದಾಣದಲ್ಲಿ ಸ್ವಚ್ಛ ಭಾರತ ಯೋಜನೆಯ ಸಂದೇಶವನ್ನು ಸಾರುವ ಫಲಕಗಳನ್ನು ಅಳವಡಿಸಲಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ತಂಗುದಾಣ ನಿರ್ಮಾಣವಾಗಿದ್ದು, ದಿವಂಗತ ಪಿ.ಕೆ.ಸಂಜೀವ ಶೆಟ್ಟಿ ಮತ್ತು ಕೃಷ್ಣ ಶೆಡ್ತಿಯವರ ಸ್ಮರಾಣಾರ್ಥ ಅವರ ಮಕ್ಕಳು ನಿರ್ಮಿಸಿದ್ದಾರೆ.

ಎರಡೂ ತಂಗುದಾಣದಲ್ಲಿ ಸ್ವಚ್ಛ ಭಾರತ ಫಲಕದೊಂದಿಗೆ ಘನ ತ್ಯಾಜ್ಯ ನಿರ್ವಹಣೆಯ ಚಿತ್ರಗಳನ್ನು ಹಾಕಲಾಗಿದೆ. ಈ ಮೂಲಕ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ.


ದಿವಂಗತ ಪಿ.ಕೆ.ಸಂಜೀವ ಶೆಟ್ಟಿಯವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಉತ್ತಮ ಕೃಷಿಕರಾಗಿದ್ದರು. ಅವರ ನೆನಪಿಗಾಗಿ ಮಕ್ಕಳು ಪಾಂಗಾಳದಲ್ಲಿ ಸಾರ್ವಜನಿಕ ತಂಗುದಾಣವನ್ನು ಕಟ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next