Advertisement

ಪಂಢರಪುರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ: ಮಾಹಿತಿ ಪಡೆದ ಶಾಸಕಿ ಹೆಬ್ಬಾಳಕರ್

10:13 AM Nov 08, 2019 | keerthan |

ಬೆಳಗಾವಿ: ಕಾರ್ತಿಕ ಏಕಾದಶಿಯಂದು ಪಂಢರಪುರದ ಶ್ರೀ ವಿಠ್ಠಲನ ದರ್ಶನಕ್ಕೆ ಹೊರಟಾಗ ಮಹಾರಾಷ್ಟ್ರ ಅಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಐವರ ಗುರುತು ಪತ್ತೆಯಾಗಿದ್ದು, ಕೂಡಲೇ ಘಟನೆ ಬಗ್ಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾಹಿತಿ ಪಡೆದುಕೊಂಡಿದ್ದಾರೆ.

Advertisement

ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದ ಬುಲೇರೋ ಟೆಂಪೋ ವಾಹನ ಚಾಲಕ ಅದಾ ಪಾಟೀಲ (44), ಮಂಡೋಳಿ ಗ್ರಾಮದ ಕೃಷ್ಣಾ ವಾಮನ ಕಣಬರಕರ (46), ಮಹಾದೇವ ಮಲ್ಲಪ್ಪ ಕಣಬರಕರ (48), ಬಾಳು ಅಂಬೇವಾಡಿಕರ (50), ಅರುಣ ಮುತಗೇಕರ (37) ಮೃತಪಟ್ಟಿದ್ದಾರೆ. ಮಾತ್ರು ಸಾಳವಿ, ಗಣಪತ ದಳವಿ, ಪರಶುರಾಮ ದಳವಿ ಗಾಯಗೊಂಡಿದ್ದಾರೆ. ಅಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಏಕಾದಶಿಗೆ ಪಂಢರಪುರಕ್ಕೆ ತೆರಳುತ್ತಿದ್ದರು. ಮಂಡೋಳಿಯ ಕೃಷ್ಣಾ ಅವರು ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಎಸ್ ಡಿಎಂಸಿ ಸದಸ್ಯರಾಗಿದ್ದರು. ಇನ್ನೂ ಕೆಲವರು ಫರ್ನಿಚರ್, ಟೇಲರ್, ಗೌಂಡಿ, ಕೃಷಿ ಕೆಲಸ ಮಾಡುತ್ತಿದ್ದರು.

ಘಟನೆ ಕುರಿತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಹಾರಾಷ್ಟ್ರದ ಸೊಲ್ಲಾಪುರದ ಶಾಸಕಿ ಪ್ರಣೀತಿ ಶಿಂಧೆ ಅವರಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗುವುದು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಶಾಸಕಿ ಶಿಂಧೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next