Advertisement

Panamburu ಹಣಕಾಸು ವಿವಾದ: ಕಾರ್ಮಿಕನ ಕೊಲೆ

09:47 PM Dec 10, 2023 | Team Udayavani |

ಪಣಂಬೂರು: ಹಣಕಾಸು ವಿಚಾರದಲ್ಲಿ ವೈಮನಸ್ಸು ಉಂಟಾಗಿ ಇಬ್ಬರು ಕಾರ್ಮಿಕರ ನಡುವೆ ನಡೆದ ಹೊಡೆದಾಟದಲ್ಲಿ ಕಾರ್ಮಿಕನೋರ್ವ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ತಣ್ಣೀರುಬಾವಿಯಲ್ಲಿ ನಡೆದಿದೆ.

Advertisement

ಕೇರಳ ಕೊಲ್ಲಂ ನಿವಾಸಿ ಕಾರ್ಮಿಕ ಬಿನು (41) ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಕಾರ್ಮಿಕ. ಕಣ್ಣೂರಿನ ಕಾರ್ಮಿಕ ಬಿನೋಯ್‌ (52) ಕೊಲೆಗೈದ ಆರೋಪಿಯಾಗಿದ್ದು, ಈತನನ್ನು ಬಂಧಿಸಲಾಗಿದೆ.

ಮಂಗಳಾ ಶಿಪ್ಪಿಂಗ್‌ ಯಾರ್ಡ್‌ನಲ್ಲಿ ವೆಲ್ಡಿಂಗ್‌ ಕೆಲಸ ಮಾಡುತ್ತಿರುವ ಬಿನು ಮತ್ತು ಕಾರ್ಪೆಂಟರ್‌ ಆಗಿರುವ ಬಿನೋಯ್‌ ನಡುವೆ ಕುಡಿದ ಮತ್ತಿನಲ್ಲಿ ಹಣದ ವಿಚಾರದಲ್ಲಿ ಜಗಳ ತಾರಕಕ್ಕೇರಿದ್ದು ಈ ಸಂದರ್ಭ ಬಿನೋಯ್‌ ತಾನು ಕೆಲಸ ಮಾಡುತ್ತಿದ್ದ ಕಬ್ಬಿಣದ ಉಳಿಯಿಂದ ಬಿನುವಿನ ಹೊಟ್ಟೆಯ ಪಾರ್ಶ್ವ ಭಾಗಕ್ಕೆ ಚುಚ್ಚಿದ ಪರಿಣಾಮ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next