Advertisement

Panaji: ರೈಲ್ವೆ ಹಳಿಗಳ ಮೇಲೆ ಬಂಡೆ ಕುಸಿದು ಬಿದ್ದು ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತ

01:41 PM Jul 17, 2023 | Team Udayavani |

ಪಣಜಿ: ದೂಧಸಾಗರ್ ಸುರಂಗದ ಬಳಿ ರೈಲ್ವೆ ಟ್ರ್ಯಾಕ್ ಮೇಲೆ‌ ಜು.17ರ ಭಾನುವಾರ ಸಂಜೆ ಬಂಡೆ ಕುಸಿದು ಬಿದ್ದು ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಾರ್ಯಾಚರಣೆ ನಡೆಸಿ ಕೆಲ ಗಂಟೆಗಳಲ್ಲಿಯೇ ರೈಲ್ವೆ ಕಾರ್ಮಿಕರು ಈ ಬಂಡೆಗಳನ್ನು ತೆರವುಗೊಳಿಸಿ ರೈಲ್ವೆ ಸಂಚಾರ ಸುಗಮಗೊಳಿಸಿದರು.

Advertisement

ಘಟನೆ ನಡೆದು ಎರಡು ಗಂಟೆಗಳ ನಂತರ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿದ್ದ ಬಂಡೆಗಳನ್ನು ತೆಗೆದು ಹಾಕುವಲ್ಲಿ ರೈಲ್ವೆ ಆಡಳಿತ ಯಶಸ್ವಿಯಾಗಿದೆ.

ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದ ಬಂಡೆಗಳನ್ನು ಕೂಡಲೇ ತೆರವುಗೊಳಿಸಿದ್ದರಿಂದ ವಾಸ್ಕೋದಿಂದ ಪುಣೆಗೆ ಹೋಗುವ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ಪ್ರಯಾಣಕ್ಕೆ ಕೆಲ ಗಂಟೆಗಳ ನಂತರ ರೈಲ್ವೆ ಪ್ರಯಾಣ ಆರಂಭಗೊಂಡಿದೆ ಎನ್ನಲಾಗಿದೆ. ಈ ರೈಲು ರೈಲು ರಾತ್ರಿ 9 ಗಂಟೆಗೆ ಪುಣೆಗೆ ಹೊರಟಿತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next