Advertisement

Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!

01:07 AM Oct 21, 2024 | Team Udayavani |

ಚೆನ್ನೈ: ತಮಿಳುನಾಡಿನ ಕವರಪಟ್ಟೈ ನಲ್ಲಿ ಅ.11ರಂದು ಮೈಸೂರು – ದರ್ಭಾಂಗಾ ಬಾಗ್ಮತಿ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದ್ದಕ್ಕೆ ತಾಂತ್ರಿಕ ದೋಷಗಳು ಕಾರಣವಲ್ಲ, ಹಳಿಯಲ್ಲಿದ್ದ ಬೋಲ್ಟ್ ನಟ್‌ಗಳನ್ನು ತೆಗದುಹಾಕಿ ರೈಲು ಹಳಿ ತಪ್ಪಿಸಲು ಪಿತೂರಿ ರೂಪಿಸಲಾಗಿತ್ತು ಎಂಬುದನ್ನು ತನಿಖೆ ಬಹಿರಂಗ ಪಡಿಸಿದೆ.

Advertisement

ರೈಲಿನ 12 ಬೋಗಿಗಳು ಹಳಿ ತಪ್ಪಿದ ಪರಿಣಾಮ 20 ಮಂದಿ ಗಾಯಗೊಂಡಿದ್ದರು. ಈ ಸಂಬಂಧಿಸಿದಂತೆ ತನಿಖೆಗೂ ಆದೇಶಿ ಸಲಾಗಿತ್ತು. ಅದರಂತೆ ಟ್ರ್ಯಾಕ್‌ಮ್ಯಾನ್‌, ಲೋಕೋ ಪೈಲಟ್‌ ಹಾಗೂ ಸ್ಟೇಷನ್‌ ಮಾಸ್ಟರ್‌ ಸೇರಿದಂತೆ 15 ಮಂದಿ ರೈಲ್ವೇ ಸಿಬಂದಿಯು ರೈಲ್ವೇ ಸುರಕ್ಷ ಆಯುಕ್ತರಾದ ಎ.ಎಂ.ಚೌಧರಿ ಅವರ ಮುಂದೆ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದ್ದಾರೆ.

ತಾಂತ್ರಿಕವಾಗಿ ಯಾವ ಲೋಪವೂ ಉಂಟಾಗಿರಲಿಲ್ಲ ಎಂದು ಹೇಳಿದ್ದಾರೆ. ಪರಿಶೀಲನೆ ವೇಳೆ ಹಳಿಯ ನಟ್‌ ಮತ್ತು ಬೋಲ್ಟ್‌ಗಳನ್ನು ತೆಗೆದು ಪಿತೂರಿ ರೂಪಿಸಲಾಗಿತ್ತು ಎಂಬುದನ್ನು ದೃಢಪಡಿಸಿದ್ದಾರೆ. ಅಲ್ಲದೇ, ಕೃತ್ಯ ಎಸಗಲು ಕನಿಷ್ಠ 30 ನಿಮಿಷಗಳ ಅಗತ್ಯವಿದ್ದು, ರೈಲು ಸಂಚರಿಸು ವುದಕ್ಕೆ ಮೊದಲೇ ಈ ಕೃತ್ಯ ಎಸಗಲಾಗಿದ್ದು, ಇದರಲ್ಲಿ ಯಾರೋ ಪರಿಣತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next