Advertisement

Panaji: ಮಾಜಿ ಶಾಸಕ ಕಾರ್ಲೋಸ್ ಅಲ್ಮೇಡಾ ಬಿಜೆಪಿಗೆ ಮರು ಸೇರ್ಪಡೆ

06:48 PM Apr 02, 2024 | Team Udayavani |

ಪಣಜಿ: ವಾಸ್ಕೋ ಮಾಜಿ ಶಾಸಕ ಕಾರ್ಲೋಸ್ ಅಲ್ಮೇಡಾ ಬಿಜೆಪಿಗೆ ಮರು ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ್ ಶೇಟ್ ತಾನಾವಡೆ, ಸಚಿವರಾದ ಮಾವಿನ್ ಗುದಿನ್ಹೊ, ಅಲೆಕ್ಸ್ ಸಿಕ್ವೇರಾ ಮತ್ತು ಶಾಸಕ ಕೃಷ್ಣ ದಾಜಿ ಸಾಲ್ಕರ್ ಅವರ ಸಮ್ಮುಖದಲ್ಲಿ ಅಲ್ಮೇದಾ ಪಕ್ಷಕ್ಕೆ ಸೇರ್ಪಡೆಗೊಂಡರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಗೋವಾ ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕು ತೋಚದಂತಾಗಿದೆ ಎಂದು ತಾನಾವಡೆ ಆರೋಪಿಸಿದರು.

ಕಳೆದ ಬಾರಿ ವಾಸ್ಕೋ ಮಾಜಿ ಶಾಸಕ ಕಾರ್ಲೋಸ್ ಅಲ್ಮೇದಾ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದರು. 2022ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‍ನಲ್ಲಿ ಸ್ಪರ್ಧಿಸಿದ್ದರು. ಇದೀಗ ಮತ್ತೆ ಅಲ್ಮೇದಾ ಬಿಜೆಪಿಗೆ ಮರಳಿದ್ದಾರೆ. ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಲ್ಮೇದಾ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯವನ್ನು ಅಭಿವೃದ್ಧಿಪಡಿಸಿದ ರೀತಿಯನ್ನು ನಾನು ಪ್ರಶಂಸಿಸುತ್ತೇನೆ. ಅದಕ್ಕಾಗಿಯೇ ನಾನು ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಅಲ್ಮೇದಾ ಹೇಳಿದ್ದಾರೆ.

ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಡೆ ಮಾತನಾಡಿ, ಕಾಂಗ್ರೆಸ್ ದಿಕ್ಕು ತೋಚದ ಪಕ್ಷವಾಗಿದ್ದು, ರಾಜ್ಯದ ಎರಡೂ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ದಿಕ್ಕು ತೋಚದಂತಾಗಿದ್ದು, ಅಭ್ಯರ್ಥಿಯನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬರೂ ಅಭ್ಯರ್ಥಿಯಾಗಲು ಬಯಸುತ್ತಾರೆ ಮತ್ತು ಅವರು ಸ್ವತಂತ್ರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರ ಅಭ್ಯರ್ಥಿ ಯಾರೆಂಬುದು ನಮಗೆ ಮುಖ್ಯವಲ್ಲ. ಗೋವಾದ ಎರಡೂ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ತಾನಾವಡೆ ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಲಕ್ಷ್ಮೀಕಾಂತ್ ಪಾರ್ಸೇಕರ್ ಮತ್ತು ಉತ್ಪಲ್ ಪರಿಕ್ಕರ್ ಬಿಜೆಪಿ ಸೇರಬೇಕೋ ಬೇಡವೋ. ಕೇಂದ್ರ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಾನವಡೆ ವಿವರಿಸಿದರು.

ಇದೇ ವೇಳೆ, ಅಲ್ಮೇದಾ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರು ಬಿಜೆಪಿ ಜೊತೆಗಿದ್ದಾರೆ ಎಂದು ಸಚಿವ ಮಾವಿನ್ ಗುಡಿನ್ಹೋ ಹೇಳಿದ್ದಾರೆ. ಇದುವರೆಗೂ “ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಲು ಸಾಧ್ಯವಾಗಿಲ್ಲ, ಬಿಜೆಪಿ ಗೋವಾವನ್ನು ಹೆಚ್ಚು ಕಾಲ ಆಳುತ್ತದೆ” ಎಂದು ಮಾವಿನ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next