Advertisement

ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಾರಂಭಕ್ಕೆ ಚಾಲನೆ

04:57 PM Mar 14, 2017 | |

ಮುಂಬಯಿ: ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಿತಿ ಹಾಗೂ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ  ಮಾ. 13ರಂದು ಕುರ್ಲಾ ಪೂರ್ವದ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಅಡಿಟೋರಿಯಂನಲ್ಲಿ ಆಯೋಜಿಸಲಾದ ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಾರಂಭ  ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರಿಗೆ ನೃತ್ಯ ಸ್ಪರ್ಧೆಯನ್ನು  ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಹಾಗೂ ಕರ್ನಾಟಕ ಸರಕಾರದ ಶಾಸಕ, ಮುಂಬಯಿ ಉದ್ಯಮಿ  ನಾರಾಯಣ ಆರ್‌. ಗೌಡ ಅವರು ಉದ್ಘಾಟಿಸಿದರು.

Advertisement

ವಿಶ್ವ ಬಂಟ ಸಂಘದ ಒಕ್ಕೂಟದ ಉಪಾಧ್ಯಕ್ಷ, ಕರ್ನಾಟಕ ರಾಜೋತ್ಸವ ಪ್ರಶಸ್ತಿ ವಿಜೇತ, ಸಂಘಟಕ ಐಕಳ ಹರೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಈ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಗೌರವಾನ್ವಿತ ಅತಿಥಿಗಳಾಗಿ ಬಂಟರ ಸಂಘದ ಟ್ರಸ್ಟಿ ಎಂ. ಡಿ. ಶೆಟ್ಟಿ,  ಕಚ್ಚಾರು ನಾಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಕಡಂದಲೆ ಸುರೇಶ್‌ ಭಂಡಾರಿ, ಮಾತೃಭೂಮಿ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಸಿಎ ಶಂಕರ  ಬಿ. ಶೆಟ್ಟಿ,  ಭವಾನಿ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ತುಂಗಾ ಗ್ರೂಪ್‌ ಆಫ್‌ ಹೊಟೇಲ್ಸ್‌ ಆಡಳಿತ ನಿರ್ದೇಶಕ ಸುಧಾಕರ ಹೆಗ್ಡೆ, ಬಿಎಸ್‌ಕೆಬಿ ಅಸೋಸಿಯೇಶನ್‌ ಅಧ್ಯಕ್ಷ ಡಾ| ಸುರೇಶ್‌ ರಾವ್‌,  ಕ್ಲಾಸಿಕ್‌ ಹೊಟೇಲ್ಸ್‌ ಆಫ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಸುರೇಶ್‌ ಕಾಂಚನ್‌, ಮೇಕೈ ಗ್ರೂಪ್‌ ಆಫ್‌ ಕಂಪೆನಿಯ ಆಡಳಿತ ನಿರ್ದೇಶಕ  ಕೆ. ಎಂ. ಶೆಟ್ಟಿ, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅàಸ್‌ ಇದರ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ಮೊಗವೀರ ಬ್ಯಾಂಕಿನ ನಿರ್ದೇಶಕ ಗೋಪಾಲ ಪುತ್ರನ್‌, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ, ರಿಜೆನ್ಸ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ಆಡಳಿತ ನಿರ್ದೇಶಕ ಜಯರಾಮ್‌ ಎನ್‌. ಶೆಟ್ಟಿ, ಕೃಷ್ಣ ಪ್ಯಾಲೇಸ್‌ನ ಕೃಷ್ಣ ವೈ. ಶೆಟ್ಟಿ, ಹೊಟೇಲ್‌ ಅವೆನ್ಯೂ  ರಘುರಾಮ ಶೆಟ್ಟಿ, ದೇವಾಡಿಗ ಸಂಘ ಮುಂಬಯಿ ಕಾರ್ಯಾಧ್ಯಕ್ಷ ರವಿ ದೇವಾಡಿಗ, ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಜಾಸ್ಮಿನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ವಿ. ಶೆಟ್ಟಿ, ಕನ್ನಡಿಗ ಪರ್ತಕರ್ತರ ಸಂಘ ಮಹಾರಾಷ್ಟ್ರ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ  ಡಾ| ಶಿವ ಮೂಡಿಗೆರೆ, ಸಂತೋಷ್‌ ಕ್ಯಾಟರರ್ನ ರಾಘು ಪಿ. ಶೆಟ್ಟಿ, ಎ. ರಾಮ ನಾಯಕ್‌ ಆ್ಯಂಡ್‌ ಕಂಪೆನಿ ಮಾಟುಂಗ ಇದರ ಸತೀಶ್‌ ರಾಮ ನಾಯಕ್‌ ಅವರು ಉಪಸ್ಥಿತರಿದ್ದರು.

  ಚಿತ್ರ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next