Advertisement

“ಅಮ್ಮ’ನ ಹೆಸರಿನಲ್ಲಿ ಪ್ರಮಾಣ ಮಾಡಿ! AIADMK ನಾಯಕರಿಗೆ ತಮಿಳುನಾಡು ಮುಖ್ಯಮಂತ್ರಿ ಮನವಿ

02:53 AM Feb 23, 2021 | Team Udayavani |

ಚೆನ್ನೈ: “ಯಾರದ್ದೇ ಪ್ರಭಾವ ವಿರಲಿ, ಯಾರದ್ದೇ ಕುಮ್ಮಕ್ಕಿರಲಿ ಅಥವಾ ಅದೆಷ್ಟೇ ದೊಡ್ಡ ಆಮಿಷವಾಗಿರಲಿ ತಾವೆಂದಿಗೂ ಪಕ್ಷವನ್ನು ತೊರೆಯುವುದಿಲ್ಲ ಎಂದು ಅಮ್ಮನ (ಜೆ. ಜಯಲಲಿತಾ) ಹೆಸರಿನಲ್ಲಿ ಪ್ರತಿಜ್ಞೆ ಮಾಡಬೇಕು’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನೀರ್‌ಸೆಲ್ವಂ, ತಮ್ಮ ಎಐಎಡಿಎಂಕೆ ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ನಾಯಕರಿಗೆ ಮನವಿ ಮಾಡಿದ್ದಾರೆ.

Advertisement

ಎಐಎಡಿಎಂಕೆಯ ಮಾಜಿ ನಾಯಕಿ ವಿ.ಕೆ. ಶಶಿಕಲಾ ಅವರು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದು, ಇನ್ನೆರಡು ತಿಂಗಳಲ್ಲಿ ಬರುವ ತಮಿಳು ನಾಡು ವಿಧಾನಸಭಾ ಚುನಾ ವಣೆಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಅವರಿಂದ ಎಐಎಡಿಎಂಕೆ ಪಕ್ಷ ಒಡೆಯುವ ಭೀತಿ ಆವರಿಸಿದೆ. ಈ ಹಿನ್ನೆಲೆ ಯಲ್ಲಿ, ಉಭಯ ನಾಯಕರಿಂದ ಎಲ್ಲ ಕಾರ್ಯಕರ್ತರಿಗೆ, ನಾಯಕರಿಗೆ ಈ ರೀತಿಯ ಪತ್ರ ರವಾನೆಯಾಗಿದೆ.

ಎಐಎಡಿಎಂಕೆಯ ಶತ್ರುಗಳು, ನಂಬಿಕೆ ದ್ರೋಹಿಗಳು ಎಐಎಡಿಎಂಕೆ ಯನ್ನು ಸೋಲಿಸಲು ಕೈ ಜೋಡಿಸಿದ್ದಾರೆ. ಅವರ ಉದ್ದೇಶ ಈಡೇರಲು ಆಸ್ಪದ ನೀಡಬಾರದು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next