Advertisement

ಧರ್ಮದ ಗುಡ್ಡದಲ್ಲಿ ಪಲ್ಲಕ್ಕಿ ಮಹೋತ್ಸವ

04:43 PM Oct 27, 2020 | Suhan S |

ಹೊಸಪೇಟೆ: ಕೋವಿಡ್ ಭೀತಿ ನಡುವೆಯೂ ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತವಾಗಿ ಸಮೀಪದ ನಾಗೇನಹಳ್ಳಿ ಗ್ರಾಮದ ಧರ್ಮದ ಗುಡ್ಡದಲ್ಲಿ ಭಾನುವಾರ ಪಲ್ಲಕ್ಕಿ ಮಹೋತ್ಸವದ ಮೂಲಕ ಶ್ರೀ ಚೆನ್ನಬಸಪ್ಪ ಹಾಗೂ ನಿಜಲಿಂಗಮ್ಮ ದೇವಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು, ಬನ್ನಿ ಸಮರ್ಪಣೆ ಗೈದು ಭಕ್ತಿ ಪ್ರದರ್ಶಿಸಿದರು.

Advertisement

ನಗರದ ತಳವಾರ ಕೇರಿಯ ಶ್ರೀ ರಾಂಪುರ ದುರ್ಗಮ್ಮದೇವಿ, ಬಾಣದಕೇರಿ ನಿಜಲಿಂಗಮ್ಮ ದೇವಿ, ಮ್ಯಾಸಕೇರಿಯ ಹುಲಿಗೆಮ್ಮ ದೇವಿ ಹಾಗೂ ಕೊಂಗಮ್ಮ ದೇವಿ, ಉಕ್ಕಡಕೇರಿಯ ಹುಲಿಗೆಮ್ಮ ಹಾಗೂ ಜಲದುರ್ಗಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಫಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಧರ್ಮದಗುಡ್ಡಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು, ಗುಡ್ಡದ ಕೆಳಭಾಗದಲ್ಲಿರುವ ಬನ್ನಿಮರಕ್ಕೆ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಲ್ಲಕ್ಕಿ ಮೂಲಕ ಧರ್ಮದ ಗುಡ್ಡದಲ್ಲಿರುವ ಚೆನ್ನಬಸವೇಶ್ವರ ಹಾಗೂ ನಿಜಲಿಂಗಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಅಲ್ಲಿಂದ ಪಲ್ಲಕ್ಕಿ ಮಹೋತ್ಸವ ನಗರಕ್ಕೆ ಆಗಮಿಸಿ ಆಯಾ ದೇಗುಲಗಳಲ್ಲಿ ಸೇರಿ ಸಂಪನ್ನಗೊಂಡಿತು.

ಕೋವಿಡ್‌ ಹಿನ್ನಲೆಯಲ್ಲಿ ಪಲ್ಲಕ್ಕಿ ಹೊತ್ತು ಸಾಗುವವರು ಸೇರಿ 25 ಜನರಿಗೆ ಮಾತ್ರ ಪೊಲೀಸರು ಅವಕಾಶ ನೀಡಿದ್ದರು. ಹೊಸಪೇಟೆಯಿಂದ ನಾಗೇನಹಳ್ಳಿ ಗ್ರಾಮಕ್ಕೆ ಸಾಗುವ ಮಾರ್ಗಮಧ್ಯದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನುಅಳವಡಿಸಿ, ಮಾಸ್ಕ್ ಧರಿಸದೇ ಇರುವ ಭಕ್ತರನ್ನು ವಾಪಸ್ಸು ಕಳಹಿಸಿದರು. ಬಸವದುರ್ಗ ಗ್ರಾಮದ ರಸ್ತೆ ಸೇರಿದಂತೆ ಮುಂತಾದ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು

ಅಳಡಿಸಿದ್ದರು. ಆದರೂ ಭಕ್ತರು, ಮಾಗಣಿ ರಸ್ತೆಯ ಮೂಲಕ ಪೊಲೀಸರ ಕಣ್ಣು ತಪ್ಪಿಸಿ, ಸಹಸ್ರಾರು ಸಂಖ್ಯೆಯಲ್ಲಿ ಧರ್ಮದ ಗುಡ್ಡದಲ್ಲಿ ಜಮಾವಣೆಗೊಂಡಿದ್ದರು. ಸಚಿವ ಆನಂದ ಸಿಂಗ್‌ ಹಾಗೂ ಅವರ ಪುತ್ರ ಸಿದಾರ್ಥಸಿಂಗ್‌, ಏಳುಕೇರಿ ಮುಖಂಡರು ಹಾಗೂ ದೈವ, ಯುವಕರು, ಧರ್ಮದ ಗುಡ್ಡದ ಫಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಡಿವೈಎಸ್‌ಪಿ ರಘುಕುಮಾರ್‌ ಹಾಗೂ ಗ್ರಾಮೀಣ ಠಾಣೆಪಿಐ ಶ್ರೀನಿವಾಸ ಮೇಟಿ ಸೇರಿದಂತೆ ಇತರೆ ಅಧಿ ಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಹೊಸಪೇಟೆ,ಕಮಲಾಪುರ, ನಾಗೇನಹಳ್ಳಿ, ಬಸವದುರ್ಗ,ಹೊಸೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಭಕ್ತರು, ಧರ್ಮದ ಗುಡ್ಡದ ಪಲ್ಲಕ್ಕಿ ಮಹೋತ್ಸವಕ್ಕೆ ಸಾಕ್ಷಿಯಾದರು.

ದಸರಾ ವಿಜಯದ ಸಂಕೇತ :

Advertisement

 ಕುರುಗೋಡು: ಎಮ್ಮಿಗನೂರಿನ ಹಂಪಿ ಸಾವಿರ ಶ್ರೀ ಮಹಾಂತ ಶಿವಾಚಾರ್ಯ ಮಠದ ಮೂಲ ಗದ್ದುಗೆಗೆ ಶ್ರೀ ವಾವದೇವಾ ಶ್ರೀಗಳು ವಿಶೇಷ ಪೂಜೆಸಲ್ಲಿಸಿದರು. ನಂತರ ಮಾತನಾಡಿ, ಮಾನವ ಮೊದಲಿಗೆ ತನ್ನನ್ನು ತಾನು ಅರಿತು ಸಮಾಜಮುಖೀಯಾಗಿ ಕರ್ತವ್ಯ ನಿರ್ವಹಣೆ ಮಾಡಿದಲ್ಲಿ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ದಸರಾ ವಿಜಯದ ಸಂಕೇತವಾಗಿದೆ. ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ಮಾಡುವ ರೀತಿ ಮನುಷ್ಯ ದಾನವ ಗುಣಗಳನ್ನು ತೊರೆದು, ಮಾನವ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಮುಖ್ಯವಾಗಿ ತಾಯಿ ತಂದೆಯರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಭಕ್ತಿಯಿಲ್ಲದಿದ್ದರೆ ಜೀವನದುದ್ದಗಲಕ್ಕೂ ಸಂಭ್ರಮದ ಆಚರಣೆಗಳು ಕಾಣಲು ಸಾಧ್ಯವಿಲ್ಲ ಎಂದರು. ಗ್ರಾಮದ ಆರಾಧ್ಯ ದೇವರು ಶ್ರೀ ಜಡೇಶಿದ್ದೇಶಿವಯೋಗಿಗಳ ದೇವರ ಮೂರ್ತಿಗೆ ಬೆಳ್ಳಿ ಕವಚ ಅಲಂಕಾರ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next