Advertisement

ಛಾಯಾ ಸಮರದಲ್ಲಿ ಪಾಕ್‌ ಸೋಲೋದು ಖಂಡಿತ: ರಾಜನಾಥ್‌

09:01 AM Dec 01, 2019 | Sriram |

ಪುಣೆ: ಭಯೋತ್ಪಾದನೆ ಮೂಲಕ ಪಾಕಿಸ್ಥಾನ ಭಾರತದ ವಿರುದ್ಧ ಛಾಯಾಸಮರ ಹೂಡಿದ್ದು, ಅದರಲ್ಲಿ ಅದು ಸೋಲುವುದು ಖಂಡಿತ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ 137 ಬ್ಯಾಚಿನ ನಿರ್ಗಮನ ಪೆರೇಡ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇದೇ ವೇಳೆ ಭಯೋತ್ಪಾದಕರನ್ನು ಬಗ್ಗು ಬಡಿಯುತ್ತಿರುವ ಸಶಸ್ತ್ರ ಪಡೆಗಳನ್ನು ಶ್ಲಾ ಸಿದರ ಅವರು, ಇವರು ದೇಶದ ಶಕ್ತಿ. ಪಾಕಿಸ್ಥಾನ ಈಗ ಭಯೋತ್ಪಾದನೆಯಿಂದಾಗಿ ವಿಶ್ವ ಮಟ್ಟದಲ್ಲಿ ಏಕಾಂಗಿಯಾಗಿದೆ ಎಂದು ಹೇಳಿದರು.

ವಿದೇಶಿ ವಿದ್ಯಾರ್ಥಿಗಳೂ ಸೇರಿದಂತೆ 284 ಮಂದಿ ವಿದ್ಯಾರ್ಥಿಗಳು ಈ ಬಾರಿ ಪದವಿಗಳನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ಸುಖೋಯ್‌, ಸಾರಂಗ್‌ ಹೆಲಿಕಾಪ್ಟರ್‌ಗಳನ್ನು ಚಾಲನೆ ಮಾಡಿ ಕಸರತ್ತುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next