Advertisement

ಉದ್ಧಟತನ ಮೆರೆದ ಪಾಕ್‌ ಸೇನೆ

11:47 PM Aug 06, 2019 | Team Udayavani |

ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿರುವ ಪಾಕಿಸ್ತಾನದ ಸೇನೆಯು ಉದ್ಧಟತನ ಮೆರೆದಿದೆ. 370ನೇ ವಿಧಿ ರದ್ದು ಬೆನ್ನಲ್ಲೇ ಮಂಗಳವಾರ ಮಾತನಾಡಿರುವ ಪಾಕ್‌ ಸೇನಾ ಮುಖ್ಯಸ್ಥ ಲೆ.ಜ. ಖಮರ್‌ ಜಾವೇದ್‌ ಬಾಜ್ವಾ, “ಕಾಶ್ಮೀರಿಗರಿಗೆ ನೆರವಾಗಲು ನಾವು ಯಾವ ಹಂತಕ್ಕೂ ಹೋಗಲು ಸನ್ನದ್ಧರಾಗಿದ್ದೇವೆ’ ಎಂದಿದ್ದಾರೆ.

Advertisement

ಕಾಶ್ಮೀರಿಗರ ಹೋರಾಟದಲ್ಲಿ ಅಂತ್ಯದವರೆಗೂ ಅವರ ಜತೆಗೆ ಪಾಕ್‌ ಸೇನೆ ನಿಲ್ಲುತ್ತದೆ. ನಾವು ಸರ್ವ ಸನ್ನದ್ಧವಾಗಿದ್ದೇವೆ. ನಮ್ಮ ಹೊಣೆಗಾರಿಕೆಯನ್ನು ಪೂರೈಸಲು ನಾವು ಯಾವ ಹಂತಕ್ಕೆ ಬೇಕಿದ್ದರೂ ಹೋಗಲು ಸಿದ್ಧ ಎಂದೂ ಬಾಜ್ವಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next