Advertisement

ಭೂಪಟದಲ್ಲಿ ಪಾಕಿಸ್ತಾನ ಅಳಿಸಿ ಹೋಗಿ, ಅಖಂಡ ಭಾರತವಾಗುತ್ತದೆ: ಕೆ.ಎಸ್.ಈಶ್ವರಪ್ಪ

03:03 PM Dec 17, 2022 | Team Udayavani |

ಶಿವಮೊಗ್ಗ: ಆನೆ ಹೋಗುವ ಸಂದರ್ಭದಲ್ಲಿ ನಾಯಿಗಳು ಬೊಗಳುತ್ತವೆ. ನರೇಂದ್ರ ಮೋದಿ ದೊಡ್ಡ ಆನೆ. ಪಾಕಿಸ್ತಾನದ ಕುನ್ನಿಗಳು ಮಾತಾಡಿದರೆ.ಅವರ ಕೂದಲು ಕೂಡ ಅಲ್ಲಾಡಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಪಾಕಿಸ್ಥಾನಿ ಸಚಿವ ಬಿಲಾವಲ್ ಭುಟ್ಟೋ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆ ಪಾಲ್ಗೊಂಡು ಅವರು ಮಾತನಾಡಿದರು.

ಜಗತ್ತೇ ಇಂದು ನರೇಂದ್ರ ಮೋದಿಯನ್ನು ವಿಶ್ವನಾಯಕ ಎಂದು ಒಪ್ಪಿಕೊಂಡಿದೆ. ಭುಟ್ಟೋ ಹೇಳಿಕೆಗೆ 135 ಕೋಟಿ ಜನರಿಗೂ ಆಕ್ರೋಶ ತಂದಿದೆ‌. ಪಾಕಿಸ್ತಾನದ ಪ್ರಧಾನಿ ಈಗಲೇ ಆ ಸಚಿವನಿಗೆ ಕ್ಷಮೆ ಕೇಳಲು ಸೂಚನೆ ನೀಡಬೇಕು. ಭಂಡರು ಕ್ಷಮೆ ಕೇಳಲ್ಲ, ಭಂಡತನವೇ ಅವರ ಜೀವನ. ಆ ಸಚಿವನ ಪರವಾಗಿ ಪಾಕಿಸ್ತಾನದ ಪ್ರಧಾನಿ ನರೇಂದ್ರ ಮೋದಿಯವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಭಯೋತ್ಪಾದಕ ಬೆಳೆಸುವ ಕೇಂದ್ರ ಪಾಕಿಸ್ತಾನ. ಅದು ಅಲ್ಲಿನ ಮಾನಸಿಕತೆ. ಅದು ಬದಲಾವಣೆ ಅಗಲ್ಲ. ಪಾಕಿಸ್ತಾನದಲ್ಲಿದ್ದ ಹಿಂದುಗಳ ಹೊರ ಹಾಕಿ ಪಾಕಿಸ್ತಾನ ಹುಟ್ಟಿದೆ. ಪಾಕಿಸ್ತಾನ ಭೂಪಟದಲ್ಲಿ ಅಳಿಸಿ ಹೋಗಿ, ಅಖಂಡ ಭಾರತವಾಗುತ್ತದೆ. ಈ ಮೊದಲು ದೇಶದ ಸೈನಿಕರ ಮುಟ್ಟಿದರೆ ಕೇಳುವವರು ಇರಲಿಲ್ಲ. ಆದರೆ, ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಸೈನಿಕರಿಗೂ ಅಧಿಕಾರ ಕೊಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next