Advertisement
ಐಎಎಫ್ ಬಳಕೆ ಮಾಡುವ ಟ್ರಾನ್ಸ್ಮಿಟ್ ಸಂದೇಶಗಳು, ಯುದ್ಧ ವಿಮಾನಗಳು ಇರುವ ಜಾಗದ ಬಗ್ಗೆ ಮಾಹಿತಿ ನೀಡುವಂತೆ ವರ್ಧಮಾನ್ಗೆ ಹಿಂಸೆ ನೀಡಿರುವ ಅಂಶ ಬಯಲಾಗಿದೆ. ಇದಷ್ಟೇ ಅಲ್ಲ, ನಿದ್ದೆ ಮಾಡಲೂ ಬಿಡದ ಪಾಕ್ ಅಧಿಕಾರಿಗಳು, ಗಂಟೆಗಟ್ಟಲೇ ನಿಲ್ಲಿಸಿ, ಕತ್ತು ಹಿಸುಕಿ, ಥಳಿಸಿ ಹಿಂಸೆ ನೀಡಿದ್ದಾರೆ.
ಪಾಕಿಸ್ತಾನದ ಎಫ್-16 ಅನ್ನು ಹೊಡೆದುರುಳಿಸಿದ್ದು ಅಭಿನಂದನ್ ವರ್ಧಮಾನ್ ಅವರೇ ಎಂದು ಭಾರತೀಯ ವಾಯುಪಡೆ ಪುನರುಚ್ಚರಿಸಿದೆ. ವರ್ಧಮಾನ್ ಅವರು ತಮ್ಮ ಮಿಗ್ 21 ಬಿಸೋನ್ನಿಂದ ಆರ್-73 ಮಿಸೈಲ್ ಅನ್ನು ಫೈರ್ ಮಾಡಿ ಅಮೆರಿಕ ನಿರ್ಮಿತ, ಅತ್ಯಾಧುನಿಕ ಎಫ್-16 ಅನ್ನು ಹೊಡೆದುರುಳಿಸಿದರು ಎಂದು ಹೇಳಿದೆ. ಆದರೆ, ಇನ್ನೊಂದು ಎಫ್-16ನ ಆಮ್ರಾಮ್ ಕ್ಷಿಪಣಿಯು, ವರ್ಧಮಾನ್ ಇದ್ದ ಮಿಗ್ 21 ಬಿಸೋನ್ ಅನ್ನು ಹೊಡೆದುರುಳಿಸಿತು ಎಂದು ಮಾಹಿತಿ ನೀಡಿದೆ.
Related Articles
ತಮ್ಮ ಅಧಿಕಾರಾವಧಿಯಲ್ಲಿ ಗುಪ್ತಚರ ಮಾಹಿತಿ ಆಧರಿಸಿ ಮಸೂದ್ ಅಜರ್ ನೇತೃತ್ವದ ಜೈಶ್ ಎ ಮೊಹಮ್ಮದ್ ಭಾರತದಲ್ಲಿ ಸತತ ದಾಳಿ ನಡೆಸಿದ್ದು ಸತ್ಯ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರ್ರಫ್ ಜಾಗತಿಕ ಸಮುದಾಯದ ಮುಂದೆ ಸತ್ಯ ನುಡಿದಿದ್ದಾರೆ. ಈ ಮೂಲಕ ಪಾಕ್ ಸರ್ಕಾರಗಳೇ ಉಗ್ರ ಸಂಘಟನೆಗಳ ಮೂಲಕ ಭಾರತದಲ್ಲಿ ದಾಳಿ ನಡೆಸುತ್ತಿದ್ದವು ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಸದ್ಯ ದುಬೈ ವಾಸಿಯಾಗಿರುವ ಪರ್ವೇಜ್ ಜೈಶ್ ಸಂಘಟನೆಯನ್ನು ನಿಷೇಧಿಸಲು ಹೊರಟಿರುವ ಪಾಕ್ ಕ್ರಮವನ್ನೂ ಸ್ವಾಗತಿಸಿದ್ದಾರೆ. ಈ ಸಂಘಟನೆ ನನ್ನನ್ನೂ ಎರಡು ಬಾರಿ ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಆರೋಪಿಸಿದ್ದಾರೆ. ನೀವು ಅಧಿಕಾರದಲ್ಲಿದ್ದಾಗ ಏಕೆ ಜೈಶ್ ಸಂಘಟನೆಯನ್ನು ನಿಷೇಧಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಆಗ ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಲೇ ಇತ್ತು. ಹಾಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗಲಿಲ್ಲ ಎಂದಿದ್ದಾರೆ.
Advertisement