Advertisement

ಉಗ್ರರ ನುಸುಳುವಿಕೆಯನ್ನು ಪಾಕ್‌ ನಿಲ್ಲಿಸಬೇಕು: ರಾಜನಾಥ್‌

12:10 PM Sep 11, 2017 | Team Udayavani |

ಜಮ್ಮು : ಪಾಕಿಸ್ಥಾನ ಭಾರತದ ಜಮ್ಮು ಕಾಶ್ಮೀರದೊಳಗೆ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರನ್ನು ನುಸುಳಿಸುವುದನ್ನು ನಿಲ್ಲಿಸಬೇಕು ಎಂದ ಗೃಹ ಸಚಿವ ರಾಜನಾಥ್‌ ಸಿಂಗ್‌ ಪಾಕಿಗೆ ಖಡಕ್‌ ಸಂದೇಶ ನೀಡಿದ್ದಾರೆ.

Advertisement

ಜಮ್ಮು ಕಾಶ್ಮೀರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರಿಸ್ಥಿತಿಯು ಬಹಳಷ್ಟು ಸುಧಾರಿಸಿದೆ ಎಂದಿರುವ ರಾಜನಾಥ್‌ ಸಿಂಗ್‌ ಭಾರತ ಸರಕಾರ ಕೈಗೊಂಡಿರುವ ಉಗ್ರರ ನಿಗ್ರಹ ಕ್ರಮಗಳು ಫ‌ಲಪ್ರದವಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು. 

ರಾಜನಾಥ್‌ ಸಿಂಗ್‌ ಅವರು ಪ್ರಕೃತ ನಾಲ್ಕು ದಿನಗಳ ಜಮ್ಮು ಕಾಶ್ಮೀರ ಭೇಟಿಯಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next