Advertisement

ಪಾಕ್‌ ಪಡೆಗಳಿಂದ ನಿರಂತರ ನಾಲ್ಕನೇ ದಿನ ಕದನ ವಿರಾಮ ಉಲ್ಲಂಘನೆ

09:27 AM Apr 02, 2019 | Team Udayavani |

ಜಮ್ಮು : ಪಾಕ್‌ ಪಡೆಗಳು ಇಂದು ಸೋಮವಾರ ಬೆಳಗ್ಗೆ 7.40ರ ಸುಮಾರಿಗೆ ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿರುವ ಭಾರತೀಯ ಸೇನಾ ಹೊರ ಠಾಣೆಗಳನ್ನು ಗುರಿ ಇರಿಸಿ ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಪಾಕ್‌ ಪಡೆಗಳು ನಿರಂತರ ನಾಲ್ಕನೇ ದಿನ ನಡೆಸಿರುವ ಕದನ ವಿರಾಮ ಉಲ್ಲಂಘನೆ ಇದಾಗಿದೆ. ಪಾಕ್‌ ಪಡೆಗಳು ರಾಜೋರಿ ಮತ್ತು ಪೂಂಚ್‌ ಜಿಲ್ಲೆಗಳಲ್ಲಿನ ಭಾರತೀಯ ಸೇನಾ ಹೊರ ಠಾಣೆಗಳನ್ನು ಗುರಿ ಇರಿಸಿ ಗುಂಡಿನ ದಾಳಿ ಮತ್ತು ಭಾರೀ ಶೆಲ್ಲಿಂಗ್‌ ನಡೆಸುತ್ತಿವೆ.

ಪಾಕ್‌ ಗುಂಡಿನ ದಾಳಿಗೆ ಭಾರತೀಯ ಪಡೆಗಳು ತಕ್ಕುದಾದ ಉತ್ತರವನ್ನೇ ನೀಡುತ್ತಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next