Advertisement

ಟರ್ಕಿಗೆ ಬರದಂತೆ ಪಾಕಿಸ್ಥಾನ ಪ್ರಧಾನಿಗೆ ಸೂಚನೆ

12:47 AM Feb 11, 2023 | Team Udayavani |

ಇಸ್ಲಾಮಾಬಾದ್‌: “ನಮಲ್ಲಿ ಭೂಕಂಪ ಉಂಟಾಗಿ ಸಮಸ್ಯೆಯಾಗಿದೆ. ಅದು ಪರಿಹಾರವಾಗುವ ವರೆಗೆ ಬರಬೇಡಿ’ ಹೀಗೆಂದು ಪಾಕಿಸ್ಥಾನ ಪ್ರಧಾನಮಂತ್ರಿ ಶಹಬಾಜ್‌ ಷರೀಫ್ ಗೆ ಟರ್ಕಿ ಸ್ಪಷ್ಟ ಮಾತುಗಳಲ್ಲಿ ಸೂಚಿಸಿದೆ.

Advertisement

ಹೀಗಾಗಿ ಪಾಕ್‌ ಸರಕಾರಕ್ಕೆ ಭಾರೀ ಮುಖಭಂಗ ಉಂಟಾಗಿದೆ. ಪ್ರಮುಖ ರಾಷ್ಟ್ರಗಳು ಭೂಕಂಪದಿಂದ ನೊಂದಿರುವ ಟರ್ಕಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಪರಿಹಾರ ತಂಡಗಳನ್ನು ಕಳುಹಿಸಿವೆ. ಅದಕ್ಕೆ ಪೂರಕವಾಗಿ ಪಾಕಿಸ್ಥಾನ ಪ್ರಧಾನಿ ಟರ್ಕಿಗೆ ತೆರಳಿ, ಸಾಂತ್ವನ ಹೇಳುವ ಮೂಲಕ ವಿತ್ತೀಯ ನೆರವು ಪಡೆದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಟರ್ಕಿ ಪ್ರಧಾನಿ ಆಪ್ತ ವಲಯ “ನಮ್ಮ ಸರಕಾರಕ್ಕೆ ಈಗ ವಿದೇಶಿ ಅತಿಥಿಗಳ ಆತಿಥ್ಯ ವಹಿಸುವ ಸಂಯಮವಿಲ್ಲ, ಪರಿಹಾರ ಸಿಬಂದಿಯನ್ನು ಮಾತ್ರ ಕಳುಹಿಸಿ’ ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next