Advertisement

Pakistan; ದೌರ್ಜನ್ಯ ನಿಲ್ಲಿಸದಿದ್ದರೆ ಪಾಕಿಸ್ಥಾನಕ್ಕೆ ಮುತ್ತಿಗೆ: ಪಶ್ತೂನ್‌ ತಾಕೀತು

01:43 AM Oct 14, 2024 | Team Udayavani |

ಇಸ್ಲಾಮಾಬಾದ್‌: ಪಶ್ತೂನ್‌ ಜನಾಂಗದಮೇಲೆ ಪಾಕಿ­ಸ್ಥಾನ ಸರಕಾರ ದೌರ್ಜನ್ಯ ನಡೆಸುವುದನ್ನು ಮುಂದು­ವ­ರಿ­ಸಿದರೆ 1971ರಲ್ಲಿ ಬಾಂಗ್ಲಾದೇಶ ವಿಮೋಚನೆ ಮಾದರಿ ದಂಗೆ ಏಳುತ್ತೇವೆ. ಹೀಗೆಂದು ಪಶೂ¤ನ್‌ ತಹಫುಜ್‌ ಮೂವ್‌­ಮೆಂಟ್‌ ನಾಯಕ ಮನ್ಸೂರ್‌ ಪಶ್ತನ್‌ ಟೀಕಿ­ಸಿದ್ದಾರೆ.

Advertisement

“1971ರಲ್ಲಿ ಪಾಕಿಸ್ಥಾನದ ವಿರುದ್ಧ ಬಾಂಗ್ಲಾದೇಶ ದಂಗೆ ಎದ್ದು ಸ್ವಾತಂ­ತ್ರ್ಯ­ಕ್ಕಾಗಿ ಹೋರಾಟ ನಡೆಸಿದ್ದರು. ಆದರೆ ನಮ್ಮ ಜನಾಂಗದ­ವರಿಗೆ ಪಾಕಿಸ್ಥಾನ ಸೇನೆ ಕಿರುಕುಳ ನೀಡುತ್ತಿದೆ. ಕಿರುಕು­ಳದ ವಿರುದ್ಧ ಸೈನಿಕರ ಚರ್ಮವನ್ನೇ ಸುಲಿಯ ಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. “ರಾಜಕೀಯ ಲಾಭಕ್ಕಾಗಿ ಧರ್ಮ ಬಳಸಿ ಪಾಕಿಸ್ಥಾನ ಬೂಟಾಟಿಕೆ ಮಾಡು­ತ್ತಿದೆ. ದಬ್ಟಾಳಿಕೆಗಳು ಇನ್ನಷ್ಟು ಮುಂದುವರಿ­ಯಲು ಸಾಧ್ಯವಿಲ್ಲ. ನಾವು ನಿಮ್ಮೊಂದಿಗೆ ಇರಲು ಬಯಸುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next