Advertisement

ಪಾಕ್‌ ಹಾಕಿ ದಿಗ್ಗಜನಿಗೆ ಭಾರತದಲ್ಲಿ ಹೃದಯ ಕಸಿ

06:00 AM Apr 25, 2018 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ ಹಾಕಿ ದಿಗ್ಗಜ ಮನ್ಸೂರ್‌ ಅಹ್ಮದ್‌ ಭಾರತದಲ್ಲಿ ಹೃದಯ ಕಸಿ ಮಾಡಿಕೊಳ್ಳಲಿದ್ದಾರೆ. ಮನ್ಸೂರ್‌ ಅಹ್ಮದ್‌ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೃದಯ ಕಸಿ ಮಾಡಿಕೊಂಡರಷ್ಟೇ ಬದುಕಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮನ್ಸೂರ್‌ ಅಹ್ಮದ್‌ ಪಾಕಿಸ್ಥಾನ ವಿಶ್ವ ಕಪ್‌ ವಿಜೇತ ತಂಡದಲ್ಲಿ ಗೋಲ್‌ಕೀಪರ್‌ ಆಗಿ ಕೆಲಸ ಮಾಡಿದ್ದರು. ಸದ್ಯ ಭಾರತಕ್ಕೆ ಆಗಮಿಸಿ ಹೃದಯ ಕಸಿ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಭಾರತ ಸರಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next