Advertisement

ಪಾಕ್‌ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

09:25 AM May 18, 2018 | Team Udayavani |

ಜಮ್ಮು/ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ರಮ್ಜಾನ್‌ ಮತ್ತು ಅಮರನಾಥ ಯಾತ್ರೆ ಸಲುವಾಗಿ ಕೇಂದ್ರ ಸರಕಾರ ಕದನ ವಿರಾಮ ಘೋಷಿಸಿದ ಹೊರತಾಗಿಯೂ ಕಣಿವೆ ರಾಜ್ಯದ ಕಥುವಾ ಮತ್ತು ಸಾಂಬಾ ಜಿಲ್ಲೆ ವ್ಯಾಪ್ತಿಯಲ್ಲಿರುವ LOCಯಲ್ಲಿ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿವೆ. ಇದರಿಂದಾಗಿ ಬಿ.ಎಸ್‌.ಎಫ್. ಯೋಧ ಸಹಿತ ಇಬ್ಬರು ಗಾಯಗೊಂಡಿದ್ದಾರೆ. ಬುಧವಾರ ತಡ ರಾತ್ರಿ 2 ಗಂಟೆಯಿಂದ ಸಾಂಬಾದಲ್ಲಿ ಮತ್ತು ಕಥುವಾದಲ್ಲಿ ರಾತ್ರಿ 10 ಗಂಟೆಯಿಂದ ಗುಂಡು ಹಾರಾಟ ಶುರುವಾಗಿತ್ತು.

Advertisement

ಇದೇ ವೇಳೆ ಘೋಷಿತ ಕದನ ವಿರಾಮ ಗುರುವಾರದಿಂದ ಜಾರಿಗೆ ಬಂದಿದ್ದು, ಅದು ಹೇಗೆ ಯಶಸ್ವಿಯಾಗುವುದೇ ಎಂದು ಕೇಂದ್ರ ಭದ್ರತಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಎರಡು ದಶಕಗಳ ಹಿಂದಿನಿಂದಲೂ ಇದೇ ಪದ್ಧತಿ ಅನುಸರಿಸಿದ್ದರೂ 43 ಮಂದಿ ಭದ್ರತಾ ಸಿಬ್ಬಂದಿ ಸಹಿತ 129 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ  ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next