Advertisement

Nawaz Sharif: ಪಾಕಿಸ್ತಾನ ಭಿಕ್ಷೆ ಬೇಡುತ್ತಿದೆ; ಮಾಜಿ ಪ್ರಧಾನಿ ನವಾಜ್‌ ಷರೀಫ್

10:37 AM Sep 20, 2023 | Team Udayavani |

ಇಸ್ಲಾಮಾಬಾದ್‌: ಭಾರತ ಯಶಸ್ವಿಯಾಗಿ ಚಂದ್ರನಲ್ಲಿಗೆ ಕಾಲಿಟ್ಟಿದೆ, ಜಿ-20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿ ಸಭೆ ನಡೆಸುವ ಮಟ್ಟಕ್ಕೆ ಬೆಳೆದಿದೆ! ಆದರೆ, ಪಾಕಿಸ್ತಾನ ವಿಶ್ವರಾಷ್ಟ್ರಗಳ ಮುಂದೆ ಇನ್ನೂ ಭಿಕ್ಷೆ ಬೇಡುತ್ತಿದೆ.. ಹೀಗೆಂದು ಆ ದೇಶದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಹೇಳಿದ್ದಾರೆ.

Advertisement

ದೇಶದ ದಿವಾಳಿತನಕ್ಕೆ ಸೇನೆಯ ನಿವೃತ್ತ ಅಧಿಕಾರಿಗಳು, ನ್ಯಾಯಾಂಗ ಕ್ಷೇತ್ರವನ್ನು ಹೊಣೆಯಾಗಿ ಟೀಕಿಸಿರುವ ಅವರು, ಅರ್ಥ ವ್ಯವಸ್ಥೆ ಪತನದತ್ತ ಸಾಗುತ್ತಿದೆ ಎಂದು ದೂರಿದ್ದಾರೆ.

ಹಣದುಬ್ಬರ ಸಾಮಾನ್ಯ ಜನರ ಬದುಕಿಗೆ ಬರೆ ಎಳೆಯುತ್ತಿದೆ. ಭಾರತ ಚಂದ್ರನನ್ನ ತಲುಪಿ, ಜಿ-20 ಸಭೆ ನಡೆಸುತ್ತಿದ್ದರೆ, ನಮ್ಮ ದೇಶದ ಪ್ರಧಾನಿ ಬೇರೆ ರಾಷ್ಟ್ರಗಳಿಗೆ ಭಿಕ್ಷೆ ಬೇಡಲು ಹೋಗುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next