Advertisement

ಪಾಕ್‌ ದಾಳಿಗೆ ಉತ್ತರ: ಭದ್ರತಾ ಪಡೆಯಿಂದ ಪಾಕ್‌ ಸೈನಿಕನ ಹತ್ಯೆ

07:24 PM Feb 21, 2018 | Team Udayavani |

ಶ್ರೀನಗರ : ಪಾಕ್‌ ಸೈನಿಕರು ಇಂದು ಜಮ್ಮು ಕಾಶ್ಮೀರದ ತಂಗಧಾರ್‌ ವಲಯದಲ್ಲಿನ ಗಡಿ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಗೈದು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆ ಅತ್ಯುಗ್ರ ಗುಂಡಿನ ಉತ್ತರ ನೀಡಿದಾಗ ಓರ್ವ ಪಾಕ್‌ ಸೈನಿಕ ಹತನಾದನೆಂದು ಸೇನಾ ಮೂಲಗಳು ತಿಳಿಸಿವೆ.

Advertisement

ಕುಪ್ವಾರಾ ಜಿಲ್ಲೆಯ ತಂಗಧಾರ್‌ ವಲಯದಲ್ಲಿನ ಭಾರತೀಯ ಸೇನಾ ಪಡೆಯ ಹೊರ ಠಾಣೆಗಳನ್ನು ಗುರಿ ಇರಿಸಿ ಪಾಕ್‌ ಸೈನಿಕರು ಇಂದು ಬುಧವಾರ ಮಧ್ಯಾಹ್ನ ಗುಂಡಿನ ದಾಳಿ ನಡೆಸಿದರು. 

ಇದಕ್ಕೆ ಭಾರತೀಯ ಸೇನಾ ಪಡೆ ತಕ್ಕುದಾದ ಮತ್ತು ಪರಿಣಾಮಕಾರಿಯಾದ ಉತ್ತರ ನೀಡಿತು. ಆಗ ಪಾಕ್‌ ಸೈನಿಕನೊಬ್ಬ ಹತನಾದ. ಭಾರತೀಯ ಸೇನೆಯ ಕಡೆಯಲ್ಲಿ ಯಾವುದೇ ಸಾವು ನೋವು, ಗಾಯ ಉಂಟಾಗಿಲ್ಲ ಎಂದು ಸೇನಾ ಮೂಲಗಳು ಹೇಳಿವೆ.  

Advertisement

Udayavani is now on Telegram. Click here to join our channel and stay updated with the latest news.

Next