Advertisement

ಪೇಂಟ್ಸ್ ತುಂಬಿದ್ದ ಲಾರಿಗೆ ಕಂಟೇನರ್ ಢಿಕ್ಕಿ: ಹೊತ್ತಿ ಉರಿದ ಲಾರಿ

01:25 PM Oct 21, 2020 | keerthan |

ಚಿತ್ರದುರ್ಗ: ಪೇಂಟ್ಸ್ ತುಂಬಿದ್ದ ಲಾರಿಗೆ ಮತ್ತೊಂದು ಲಾರಿ ಢಿಕ್ಕಿಯಾಗಿ ಹೊತ್ತಿ ಉರಿದ ಘಟನೆ ಹಿರಿಯೂರು ತಾಲೂಕು ಗೊರಲಡುಕು ಬಳಿ ನಡೆದಿದೆ.

Advertisement

ಬುಧವಾರ ನಸುಕಿನಲ್ಲಿ ಬೆಂಗಳೂರು ಕಡೆಯಿಂದ ಹಿರಿಯೂರು ಕಡೆ ಬರುತ್ತಿದ್ದ ಏಷಿಯನ್ ಪೇಂಟ್ಸ್ ತುಂಬಿದ್ದ ಲಾರಿಗೆ ಕಂಟೇನರ್ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಬೆಂಕಿ ಹತ್ತಿಕೊಂಡಿದ್ದು, ಲಾರಿ ಹೊತ್ತಿ ಉರಿದಿದೆ.

ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಉರಿಯುವ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕಾಶ್ಮೀರ: ISIS‌ ಕುತಂತ್ರ ಅನುಸರಿಸುತ್ತಿರುವ ಪಾಕ್‌; ಡ್ರೋನ್‌ ಮೂಲಕ ಬಾಂಬ್‌, ಶಸ್ತ್ರಾಸ್ತ್ರ

Advertisement

Advertisement

Udayavani is now on Telegram. Click here to join our channel and stay updated with the latest news.

Next