Advertisement

ಪಡುಮಾರ್ನಾಡು: ಪಂಚಾಯತ್‌ ಎದುರು ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

11:01 PM May 30, 2019 | Team Udayavani |

ಮೂಡುಬಿದಿರೆ: ಪಡು ಮಾರ್ನಾಡು ಗ್ರಾ.ಪಂ. ಒಂದನೇ ವಾರ್ಡ್‌ ನ 5 ಸೆಂಟ್ಸ್‌ ಕಾಲನಿಯ ಜನರು ಮೂರು ದಿನಗಳಿಂದ ಕುಡಿಯುವ ನೀರು ಪೂರೈಕೆ ಯಾಗುತ್ತಿಲ್ಲ ಎಂದು ಆರೋಪಿಸಿ ಗುರುವಾರ ಬೆಳಗ್ಗೆ ಪಂಚಾಯತ್‌ ಎದುರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟಿಸಿದರು.

Advertisement

ಕುಡಿಯಲು ಮತ್ತು ದೈನಂದಿನ ಬಳಕೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಪಂಚಾಯತ್‌ನ ಗಮನಕ್ಕೂ ತಂದಿ ದ್ದರು. ಆದರೆ ಪ್ರಯೋಜನವಾಗದ ಕಾರಣ ಗುರುವಾರ ಗ್ರಾಮಸ್ಥರು ಪಿಡಿಓ ಅವರಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದ ಪಿಡಿಒ ರವಿ ಅವರು ನೀರಿನ ಪಂಪ್‌ ಕೆಟ್ಟು ಹೋಗಿರುವುದರಿಂದ ಮನೆ ಮನೆಗೆ ನೀರು ಸರಬರಾಜು ಆಗುತ್ತಿಲ್ಲ. ಇಂದು ಸಂಜೆಯೊಳಗೆ ಪಂಪ್‌ ಸರಿಪಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು. ಮಾತನ್ನು ಮನ್ನಿಸಿ ಜನರು ಪ್ರತಿಭಟನೆ ನಿಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next