Advertisement

Padubidri; ಟಿಪ್ಪರ್‌ ಸಹಿತ ಅಕ್ರಮ ಮರಳು ವಶ

10:28 PM Feb 17, 2024 | Team Udayavani |

ಪಡುಬಿದ್ರಿ: ನಿಲ್ಲಿಸಲು ಸೂಚನೆ ನೀಡಿದ್ದರೂ ಪರಾರಿಯಾಗಿದ್ದ ಟಿಪ್ಪರೊಂದನ್ನು ಶನಿವಾರ ಮುಂಜಾನೆ ಅದರಲ್ಲಿದ್ದ ಸುಮಾರು 15,000 ರೂ. ಗಳ 3 ಯುನಿಟ್‌ ಮರಳಿನ ಸಹಿತ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

ಕಾರ್ಕಳ ಜಂಕ್ಷನ್‌ ಬಳಿ ರೌಂಡ್ಸ್‌ನಲ್ಲಿದ್ದ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಅವರು ಸೂಚಿಸಿದಾಗ ಟಿಪ್ಪರನ್ನು ನಿಲ್ಲಸದೇ ಹೋಗಿದ್ದು ಬೆನ್ನಟ್ಟಿದಾಗ ಚಾಲಕ ಎರ್ಮಾಳು ಕಲ್ಸಂಕದ ಬಳಿ ಟಿಪ್ಪರನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.
ಅದನ್ನು ಪರಿಶೀಲಿಸಿದಾಗ ಮರಳಿನ ಕುರಿತಾದ ಯಾವುದೇ ಪರವಾನಿಗೆ ಕಂಡುಬಂದಿಲ್ಲ.

ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next