Advertisement

“ಪದ್ಮಾವತಿ’ಯನ್ನು”ಶೂರ್ಪನಖೀ’ಮಾಡುವ ಬೆದರಿಕೆ

07:25 AM Nov 17, 2017 | Team Udayavani |

ನವದೆಹಲಿ: ಶೀಘ್ರದಲ್ಲೇ ಬಿಡುಗಡೆಗೊಳ್ಳುತ್ತಿರುವ “ಪದ್ಮಾವತಿ’ ವಿರುದ್ಧ ಪ್ರತಿಭಟನೆ ಹಮ್ಮಿ ಕೊಂಡಿರುವ ರಾಜಸ್ಥಾನದ ಕರ್ಣಿ ಸೇನೆ ಮುಖ್ಯಸ್ಥ ಲೋಕೇಂದ್ರ ಸಿಂಗ್‌ ಕಾಳ್ವಿ, ಚಿತ್ರವನ್ನು ಸಮರ್ಥಿಸಿಕೊಳ್ಳುತ್ತಿರುವ ನಟಿ ದೀಪಿಕಾ ಪಡುಕೋಣೆಯ ಮೂಗು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ. 

Advertisement

ಅಲ್ಲದೆ ಚಿತ್ರಕ್ಕೆ ಪಾತಕಿ ದಾವೂದ್‌ ಇಬ್ರಾಹಿಂ ಬಂಡವಾಳ ಹೂಡಿದ್ದಾನೆ ಎಂದೂ ಆರೋಪಿಸಿದ್ದಾರೆ. ಚಿತ್ರ ಬಿಡುಗಡೆಯಾದರೆ ಡಿ.1ರಂದು “ಭಾರತ್‌ ಬಂದ್‌’ ಮಾಡು ವುದಾಗಿ ಎಚ್ಚರಿಸಿದರು. ಏತನ್ಮಧ್ಯೆ, ಅಜೆ¾àರ್‌ ದರ್ಗಾದ ಜೈನುಲ್‌ ಆಬಿದೀನ್‌ ಅಲಿ ಖಾನ್‌ ಅವರೂ ಪ್ರಧಾನಿ ಮೋದಿಗೆ ಪತ್ರ ಬರೆದು, ಪದ್ಮಾವತಿ ಚಿತ್ರ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. 

“ಕೇಜ್ರಿ’ ಸಿನಿಮಾ ನಿಷೇಧವಿಲ್ಲ: ದೆಹಲಿ ಸಿಎಂ ಕೇಜ್ರಿವಾಲ್‌ ಜೀವನವನ್ನಾಧರಿಸಿದ “ಆ್ಯನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌’ ಚಿತ್ರಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next