Advertisement

ಪದ್ಮಾವತಿ ವಿವಾದ: ಭನ್ಸಾಲಿ ದಾಳಿ ಬಳಿಕ ಈಗ ಮೋದಿ ಟ್ವೀಟ್‌ ವೈರಲ್‌

04:34 PM Jan 30, 2017 | Team Udayavani |

ಹೊಸದಿಲ್ಲಿ : ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಮೇಲೆ ಜೈಪುರದಲ್ಲಿ ಪದ್ಮಾವತಿ ಚಿತ್ರದ ಶೂಟಿಂಗ್‌ ವೇಳೆ ರಜಪೂತ ಕರಣಿ ಸೇನೆಯವರು ನಡೆಸಿದ್ದ ದಾಳಿ, ಹಲ್ಲೆಯನ್ನು ಖಂಡಿಸಲು ಸಾಮಾಜಿಕ ಜಾಲತಾಣದಲ್ಲೀಗ ಪ್ರಧಾನಿ ನರೇಂದ್ರ ಮೋದಿ ವರ್ಷದ ಹಿಂದೆ ಮಾಡಿದ್ದ  ಟ್ವೀಟ್‌ ಬಳಕೆಯಾಗುತ್ತಿದ್ದು ಅದೀಗ ವೈರಲ್‌ ಆಗಿದೆ.

Advertisement

“ಕಲೆಗೆ ಯಾವುದೇ ನಿರ್ಬಂಧ, ಮಿತಿ ಇರಲು ಸಾಧ್ಯವಿಲ್ಲ’ ಎಂದು ಪ್ರಧಾನಿ ಮೋದಿ ಕಳೆದ ವರ್ಷ ಫೆಬ್ರವರಿಯಲ್ಲಿ  ಮಾಡಿರುವ ಟ್ವೀಟ್‌ ಅನ್ನು  ರಜಪೂತ ಕರಣಿ ಸೇನೆ ಕಳೆದ ಜನವರಿ 27ರಂದು ನಡೆಸಿದ್ದ ದಾಳಿ, ಹಿಂಸೆಯನ್ನು ಖಂಡಿಸಲು, ಟೀಕಿಸಲು ಅಂತರ್‌ ಜಾಲದಲ್ಲಿ  ವ್ಯಾಪಕವಾಗಿ ಬಳಸಲಾಗುತ್ತಿದೆ. 

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ನಟನೆಯ ಪದ್ಮಾವತಿ ಚಿತ್ರದಲ್ಲಿ ಭನ್ಸಾಲಿ ಅವರು ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿ ಕರಣಿ ಸೇನೆಯವರು ಶೂಟಿಂಗ್‌ ತಾಣದ ಮೇಲೆ ದಾಳಿ ನಡೆಸಿ ಭನ್ಸಾಲಿ ಮೇಲೆ ಹಲ್ಲೆಗೈದಿದ್ದರು. ಭನ್ಸಾಲಿ ಅವರು ಒಡನೆಯೇ ಶೂಟಿಂಗ್‌ ನಿಲ್ಲಿಸಿ ಚಿತ್ರ ತಂಡದೊಂದಿಗೆ ಮರಳಿದ್ದರು. 

ಭನ್ಸಾಲಿ ಮೇಲಿನ ಹಲ್ಲೆಗೆ ಬಾಲಿವುಡ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನು ಅನುಸರಿಸಿ ಸಾಮಾಜಿಕ ಜಾಲ ತಾಣದಲ್ಲಿ ರಜಪೂತ ಕರಣಿ ಸೇನೆಯ ವಿರುದ್ಧ ಟೀಕೆ, ಖಂಡನೆ ವ್ಯಕ್ತವಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next