Advertisement

ಭತ್ತದ ಬೆಂಬಲ ಬೆಲೆ ಹೆಚ್ಚಳ : ಪ್ರತೀ ಕ್ವಿಂಟಾಲ್‌ಗೆ 1,940 ರೂ. ಕೇಂದ್ರ ನಿರ್ಧಾರ

02:03 AM Jun 10, 2021 | Team Udayavani |

ಹೊಸದಿಲ್ಲಿ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಕೇಂದ್ರ ಸರಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಭತ್ತ, ಹತ್ತಿ, ಜೋಳ, ರಾಗಿ, ದ್ವಿದಳ ಧಾನ್ಯ ಸೇರಿದಂತೆ ಮುಂಗಾರು ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲಾಗಿದೆ.

Advertisement

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯುವ ಭತ್ತಕ್ಕೆ 72 ರೂ. ಎಂಎಸ್‌ಪಿ ಹೆಚ್ಚಳ ಮಾಡಲಾಗಿದೆ. ಈ ಮೂಲಕ 2021-22ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್‌ ಭತ್ತದ ಬೆಲೆ 1,940 ರೂ.ಗಳಾಗಲಿವೆ. ಪ್ರಮುಖ ವಾಣಿಜ್ಯ ಬೆಳೆ ಹತ್ತಿಯ ಬೆಂಬಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಇದಕ್ಕೆ 211 ರೂ.ಗಳಷ್ಟು ಏರಿಕೆ ಮಾಡಲಾಗಿದ್ದು, ಈ ಮೂಲಕ ಕ್ವಿಂಟಾಲ್‌ ಹತ್ತಿಗೆ 5,726 ರೂ.ಗಳಾಗಿವೆ. ಹಾಗೆಯೇ ಮತ್ತೂಂದು ತಳಿಯ ಹತ್ತಿಯ ಎಂಎಸ್‌ ಪಿಯನ್ನೂ 200 ರೂ. ಹೆಚ್ಚಿಸಲಾಗಿದ್ದು, ಇದು ಪ್ರತಿ ಕ್ವಿಂಟಾಲ್‌ಗೆ 6,025 ರೂ.ಗಳಷ್ಟಾಗಿದೆ.

ಸಂಪುಟ ಸಭೆ ಅನಂತರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಗಾರು ಹಂಗಾಮಿನ ಒಟ್ಟು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದರು. ಈ ಮೂಲಕ ರೈತರು ವೆಚ್ಚ ಮಾಡಿದ ಶೇ. 50ರಿಂದ 85ರಷ್ಟು ಹಣ ಈ ಕನಿಷ್ಠ ಬೆಂಬಲ ಬೆಲೆಯಿಂದಲೇ ಬರಲಿದೆ ಎಂದರು.

ಈ ಮಧ್ಯೆ ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆಯೂ ಮಾತನಾಡಿದ ಅವರು, ಎಂಎಸ್‌ಪಿ ಈಗಲೂ ಇರುತ್ತದೆ, ಮುಂದೆಯೂ ಇರುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು. ಹಾಗೆಯೇ ಈಗಲೂ ಎಂಎಸ್‌ಪಿ ದರ ಹೆಚ್ಚಿಸುತ್ತಿದ್ದೇವೆ, ಮುಂದೆಯೂ ಹೆಚ್ಚಳ ಮಾಡುತ್ತಾ ಹೋಗುತ್ತೇವೆ ಎಂಬ ಭರವಸೆಯನ್ನೂ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next