Advertisement

ಪ್ಯಾಕೇಜ್‌ ಟೆಂಡರ್‌, ಜಿಎಸ್ಟಿಯಿಂದ ಗುತ್ತಿಗೆದಾರರಿಗೆ ಸಂಕಷ್ಟ

02:41 PM Sep 03, 2017 | |

ಚಿಕ್ಕಬಳ್ಳಾಪುರ: ಗುತ್ತಿಗೆದಾರರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳುತ್ತಿರುವ ಪ್ಯಾಕೇಜ್‌ ಟೆಂಡರ್‌ ಪದ್ಧತಿಯನ್ನು ಕೂಡಲೇ ರದ್ದುಗೊಳಿಸುವಂತೆ ಹಾಗೂ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಜಿಎಸ್‌ಟಿಯಲ್ಲಿ ಗೊಂದಲ ನಿವಾರಣೆಗೆ ಆಗ್ರಹಿಸಿ ಸೆ.22, 23ರಂದು ಎರಡು ದಿನಗಳ ಕಾಲ
ಬೆಂಗಳೂರಿನಲ್ಲಿ ರಾಜ್ಯ ಗುತ್ತಿಗೆದಾರರ ಮಹಾ ಸಮ್ಮೇಳನ ಸಂಘಟಿಸಲಾಗಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್‌.ವಿ.ಚಿಕ್ಕಗೆರಿಗಿರೆಡ್ಡಿ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ರೈತರು ಯಾವ ರೀತಿ ಅನ್ನದಾತರಾಗಿ ಬೆನ್ನಲುಬಾಗಿ ನಿಂತಿದ್ದಾರೆ. ಅದೇ ರೀತಿ ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗುತ್ತಿಗೆದಾರರು ಕೂಡ ದೇಶಕ್ಕೆ ಬೆನ್ನಲುಬಾಗಿದ್ದಾರೆ.
ಆದರೆ, ಸರ್ಕಾರಗಳು ಅನುಸರಿಸುತ್ತಿರುವ ಕೆಲ ನೀತಿಗಳು ಗುತ್ತಿಗೆದಾರರಿಗೆ ಕಂಟಕವಾಗಿದ್ದು, ಆರ್ಥಿಕ ಸಂಕಷ್ಟದ ಸುಳಿ ಯಲ್ಲಿ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಸಿದರು.

ದೇಶದ ಬೆಳವಣಿಗೆಯಲ್ಲಿ ಗುತ್ತಿಗೆದಾರರ ಪಾತ್ರ ಅಮೂಲ್ಯ ವಾಗಿದೆ. ರಾಜ್ಯದಲ್ಲಿ ಶೇ.30 ರಿಂದ 40 ರಷ್ಟು ದುಡಿಯುವ ಜನತೆಗೆ ಕೂಲಿ ಕೆಲಸ ನೀಡುತ್ತಿರುವ ಗುತ್ತಿಗೆದಾರರು ಸಹಸ್ರಾರು ಕುಟುಂಬಗಳ ಜೀವನಾಧಾರಕ್ಕೆ ಭದ್ರ ಬುನಾದಿ ಕಲ್ಪಿಸಿದ್ದಾರೆ. ಆದರೆ ಸರ್ಕಾರ ಇತ್ತೀಚಿನ ದಿನಗಳಲ್ಲಿ
ಕಾಮಗಾರಿಗಳನ್ನು ಪ್ಯಾಕೇಜ್‌ ಟೆಂಡರ್‌ ಕೆರೆಯುವ ಮೂಲಕ ಗುತ್ತಿಗೆದಾರರಿಗೆ ಕೆಲಸ ಇಲ್ಲದಂತಾಗಿದೆ. ಇದರಿಂದ ಲಕ್ಷಾಂತರ ರೂ. ಬಂಡ ವಾಳ ಹಾಕಿ ಖರೀಸಿರುವ ಯಂತ್ರೋಪಕರಣ
ಗಳಿಗೆ ಕೆಲಸ ಇಲ್ಲದೇ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದೇ ಇತ್ತ ಕೂಲಿ ಕಾರ್ಮಿಕರಿಗೂ ಸಮರ್ಪಕ ಕೆಲಸ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಮ್ಮೇಳನಕ್ಕೆ ಸಿಎಂ ಚಾಲನೆ: ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಶೀಷ್‌ ಮಹಲ್‌ನಲ್ಲಿ ಸೆ.22, 23 ರಂದು ನಡೆಯಲಿರುವ 2 ದಿನಗಳ ಗುತ್ತಿಗಾರರ ಮಹಾ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಡಾ.
ಎಚ್‌.ಸಿ. ಮಹಾದೇವಪ್ಪ, ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಸೇರಿದಂತೆ ರಾಜ್ಯ ಸಚಿವ ಸಂಪುಟದ ಅನೇಕ ಸಚಿವರು ಭಾಗವಹಿಸಲಿದ್ದಾರೆ. ಎರಡನೇ ದಿನ ನಡೆಯುವ ಸಮ್ಮೇಳನಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ. ಕೇಂದ್ರ
ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌ ಮತ್ತಿತರರು ಭಾಗವಹಿಸಲಿದ್ದಾರೆ. ಸಮ್ಮೇಳನದ ಭಾಗವಾಗಿ ಗುತ್ತಿಗೆದಾರರಿಗೆ ವಿವಿಧ ವಿಷಯಗಳ ಕುರಿತು ನುರಿತ ತಜ್ಞರಿಂದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು ಲಕ್ಷ ಗುತ್ತಿಗೆದಾರರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಮ್ಮೇಳನದ ಹಕ್ಕೊತ್ತಾಯಗಳೇನು?: ರಾಜ್ಯ ಸರ್ಕಾರ ಕಾಮಗಾರಿ ಶುಲ್ಕಗಳನ್ನು ಪ್ರತ್ಯೇಕವಾಗಿ ದರಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು. ಪ್ಯಾಕೇಜ್‌ ಟೆಂಡರ್‌ ಪದ್ಧತಿಯನ್ನು ರದ್ದುಗೊಳಿಸಬೇಕು, ಇ-ಟೆಂಡರ್‌ ಪದ್ಧತಿಯಲ್ಲಿ ಇನ್ನಷ್ಟು ಸುಧಾರಣೆ ಹಾಗೂ ಪಾರದರ್ಶಕತೆಯನ್ನು ರೂಪಿಸ ಬೇಕು, ಜಿಎಸ್‌ಟಿ ಗೊಂದಲಗಳ ನಿವಾರಣೆಗೆ ಜತೆಗೆ ಗುತ್ತಿಗೆದಾರರಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು
ಎಂಬುದು ಸೇರಿದಂತೆ ಗುತ್ತಿಗೆದಾರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳು ವುದರ ಜತೆಗೆ ಗುತ್ತಿಗೆದಾರರ ಸಂಘಟನೆಯನ್ನು ಬಲಪಡಿಸುವ ಉದ್ದೇಶ ದಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ಗುತ್ತಿಗೆದಾರರ ಮಹಾ ಸಮ್ಮೇಳನ
ಆಯೋಜಿಸಲಾಗಿದೆ ಎಂದು ಎಚ್‌.ವಿ.ಚಿಕ್ಕಗೆರಿಗಿರೆಡ್ಡಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಗುತ್ತಿಗೆದಾರರ ಸಂಘದ ಉಪ ಕಾರ್ಯದರ್ಶಿ ಕೆ.ಗೋಪಿನಾಥ್‌, ಖಜಾಂಚಿ ಹೆಚ್‌.ಮುನೇಗೌಡ, ಪದಾಧಿಕಾರಿಗಳಾದ ಜೆ.ಕೆ. ಚಂದ್ರಶೇಖರರೆಡ್ಡಿ, ಅಡ್ಡಗಲ್‌ ಶ್ರೀಧರ್‌, ಮುರಳಿಬಾಬು, ಕಾಳಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next