Advertisement

ಬದುಕನ್ನೇ ಸುಡುತ್ತಿದೆ ‘ಪಚ್ಚನಾಡಿ ಡಂಪಿಂಗ್‌ ಯಾರ್ಡ್‌’

04:22 AM May 15, 2019 | mahesh |

ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಹಾಕಿರುವ ತ್ಯಾಜ್ಯಕ್ಕೆ ಬೆಂಕಿಬಿದ್ದು ಹೊತ್ತಿ ಉರಿದ ಪರಿಣಾಮ ವಿಷಪೂರಿತ ಹೊಗೆ ಯಿಂದ ಮಂಗಳನಗರ, ಮಂಗಳ ಜ್ಯೋತಿ ವ್ಯಾಪ್ತಿಯ ಹಲವು ಜನರು ಅಸ್ವಸ್ಥರಾ ಗಿದ್ದಾರೆ.

Advertisement

ವಿಷಪೂರಿತ ಹೊಗೆ ಇನ್ನೂ ನಿಂತಿಲ್ಲವಾ ದ್ದರಿಂದ ಮಂಗಳನಗರ ವ್ಯಾಪ್ತಿಯ ಸುಮಾರು 150ಕ್ಕೂ ಅಧಿಕ ಮನೆಯ ಬಹುತೇಕ ಮಂದಿ ಕೆಮ್ಮು, ವಾಂತಿಯಿಂದ ಬಳಲುತ್ತಿದ್ದಾರೆ. ಈ ಪೈಕಿ ಇಬ್ಬರು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಬಹುತೇಕರು ಮನೆಗೆ ಬೀಗ ಹಾಕಿ, ಸಂಬಂಧಿಕರ ಮನೆಗೆ ತೆರಳಿದ್ದಾರೆ.

ರವಿವಾರ ಸಂಜೆ ಕಸದ ರಾಶಿಯ ಒಂದು ಭಾಗಕ್ಕೆ ಬೆಂಕಿ ಬಿದ್ದಿತ್ತು. ಸೋಮವಾರ ದಿನಪೂರ್ತಿ ವ್ಯಾಪಿಸಿತ್ತು. ಅಗ್ನಿಶಾಮಕದಳದಿಂದ ಬೆಂಕಿ ನಂದಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ. ಪರಿಣಾಮ ಸೋಮವಾರ ರಾತ್ರಿ ವಿಷಪೂರಿತ ಹೊಗೆ ಮತ್ತಷ್ಟು ವ್ಯಾಪಿಸಿ, ಸ್ಥಳೀಯರಿಗೆ ಉಸಿರಾಟಕ್ಕೂ ತೊಂದರೆ ಯಾಯಿತು. ಜತೆಗೆ ಕೆಲವರು ತಲೆಸುತ್ತು, ವಾಂತಿಯಿಂದ ಅಸ್ವಸ್ಥರಾದರು. ಹೀಗಾಗಿ ಕೆಲವರು ಸ್ಥಳೀಯ ಆಸ್ಪತ್ರೆಗೆ ರಾತ್ರಿಯೇ ದಾಖಲಾಗಿ ಚಿಕಿತ್ಸೆ ಪಡೆದು, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಉಸಿರಾಟಕ್ಕೆ ತೊಂದರೆ
ವಿಷಪೂರಿತ ಹೊಗೆ ವ್ಯಾಪಿಸಿದ ಪರಿಣಾಮ ಸ್ಥಳೀಯರು ಮೂಗು ಮುಚ್ಚಿ ಕಣ್ಣಿಗೂ ಬಟ್ಟೆ ಕಟ್ಟುವ ಪರಿಸ್ಥಿತಿಯಿದೆ.

ತ್ಯಾಜ್ಯದ ರಾಶಿ ಅಧಿಕವಾಗುತ್ತಿದ್ದಂತೆ ಇಲ್ಲಿ ಬೆಂಕಿ ಬೀಳುವ ಘಟನೆ ನಡೆಯುತ್ತಲೇ ಇದೆ ಎಂಬ ಮಾತು ಒಂದೆಡೆಯಾದರೆ, ಗುಜಿರಿ ಹೆಕ್ಕುವವರು ಕೂಡ ಕೆಲವೊಮ್ಮೆ ಬೆಂಕಿ ಕೊಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್‌ ಗ್ಯಾಸ್‌ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸುವ ಕಾರಣದಿಂದ ಹೊಗೆಬತ್ತಿಯ ಕಿಡಿಯೂ ಬೆಂಕಿಗೆ ಕಾರಣವಾಗಲೂಬಹುದು. ತ್ಯಾಜ್ಯದ ರಾಶಿ ಇರುವ ಪ್ರದೇಶಕ್ಕೆ ಯಾರು ಬೇಕಾದರೂ ಬಂದು ಹೋಗುವಂತಹ ಪರಿಸ್ಥಿತಿ ಇದೆ.

Advertisement

ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳವಾರ ಡಂಪಿಂಗ್‌ ಯಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಡಂಪಿಂಗ್‌ ಯಾರ್ಡ್‌ನ ದುಸ್ಥಿತಿಯನ್ನು ವಿವರಿಸಿದರು. ಪಾಲಿಕೆಯ ವಿವಿಧ ಅಧಿಕಾರಿಗಳು ಹಾಜರಿದ್ದರು. ತ್ಯಾಜ್ಯದ ರಾಶಿಗೆ ಬೆಂಕಿ ಬೀಳುವ ಪರಿಸ್ಥಿತಿ ನಿತ್ಯ ಆಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಯಾಕೆ ಶಾಶ್ವತ ಪರಿಹಾರ ಹುಡುಕುತ್ತಿಲ್ಲ? ಕಾಂಪೌಂಡ್‌ ಗೋಡೆ ಯಾಕೆ ಮಾಡಿಲ್ಲ? ಕೇರಳದ ವಾಹನದವರೂ ಇಲ್ಲಿ ತ್ಯಾಜ್ಯ ಹಾಕುವುದು ಹೇಗೆ ಸಾಧ್ಯ? ಸಿಸಿ ಕೆಮರಾ ಯಾಕೆ ಹಾಕಿಲ್ಲ? ಎಂಬ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು.

ಈ ಮಧ್ಯೆ ಹೊಗೆಯಿಂದ ರಕ್ಷಿಸಿ ಕೊಳ್ಳಲು ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಹಾಕುತ್ತಿದ್ದಂತೆ ಸ್ಥಳೀಯರು ಆಕ್ಷೇಪಿಸಿದರು. ‘ನಾವಿಲ್ಲಿ ಪ್ರತೀ ನಿತ್ಯ ಇದೇ ವಿಷಪೂರಿತ ಹೊಗೆಯಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ನೀವು ವರ್ಷಕ್ಕೊಮ್ಮೆ ಬಂದು ಮಾಸ್ಕ್ ಹಾಕುವುದು ಬೇಡ. ವಾಸ್ತವ ಪರಿಸ್ಥಿತಿ ಏನಿದೆ ಎಂಬುದು ನಿಮಗೂ ಗೊತ್ತಾಗಲಿ. ಮಾಸ್ಕ್ ತೆಗೆಯಿರಿ’ ಎಂದರು. ಬಳಿಕ ಮಂಗಳ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರ ಭೇಟಿ; ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ
ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳವಾರ ಡಂಪಿಂಗ್‌ ಯಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಡಂಪಿಂಗ್‌ ಯಾರ್ಡ್‌ನ ದುಸ್ಥಿತಿಯನ್ನು ವಿವರಿಸಿದರು. ಪಾಲಿಕೆಯ ವಿವಿಧ ಅಧಿಕಾರಿಗಳು ಹಾಜರಿದ್ದರು. ತ್ಯಾಜ್ಯದ ರಾಶಿಗೆ ಬೆಂಕಿ ಬೀಳುವ ಪರಿಸ್ಥಿತಿ ನಿತ್ಯ ಆಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಯಾಕೆ ಶಾಶ್ವತ ಪರಿಹಾರ ಹುಡುಕುತ್ತಿಲ್ಲ? ಕಾಂಪೌಂಡ್‌ ಗೋಡೆ ಯಾಕೆ ಮಾಡಿಲ್ಲ? ಕೇರಳದ ವಾಹನದವರೂ ಇಲ್ಲಿ ತ್ಯಾಜ್ಯ ಹಾಕುವುದು ಹೇಗೆ ಸಾಧ್ಯ? ಸಿಸಿ ಕೆಮರಾ ಯಾಕೆ ಹಾಕಿಲ್ಲ? ಎಂಬ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಹೊಗೆಯಿಂದ ರಕ್ಷಿಸಿ ಕೊಳ್ಳಲು ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಹಾಕುತ್ತಿದ್ದಂತೆ ಸ್ಥಳೀಯರು ಆಕ್ಷೇಪಿಸಿದರು. ‘ನಾವಿಲ್ಲಿ ಪ್ರತೀ ನಿತ್ಯ ಇದೇ ವಿಷಪೂರಿತ ಹೊಗೆಯಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ನೀವು ವರ್ಷಕ್ಕೊಮ್ಮೆ ಬಂದು ಮಾಸ್ಕ್ ಹಾಕುವುದು ಬೇಡ. ವಾಸ್ತವ ಪರಿಸ್ಥಿತಿ ಏನಿದೆ ಎಂಬುದು ನಿಮಗೂ ಗೊತ್ತಾಗಲಿ. ಮಾಸ್ಕ್ ತೆಗೆಯಿರಿ’ ಎಂದರು. ಬಳಿಕ ಮಂಗಳ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಕಿಗೆ ಕಾರಣವೇನು ?
ತ್ಯಾಜ್ಯದ ರಾಶಿ ಅಧಿಕವಾಗುತ್ತಿದ್ದಂತೆ ಇಲ್ಲಿ ಬೆಂಕಿ ಬೀಳುವ ಘಟನೆ ನಡೆಯುತ್ತಲೇ ಇದೆ ಎಂಬ ಮಾತು ಒಂದೆಡೆಯಾದರೆ, ಗುಜಿರಿ ಹೆಕ್ಕುವವರು ಕೂಡ ಕೆಲವೊಮ್ಮೆ ಬೆಂಕಿ ಕೊಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್‌ ಗ್ಯಾಸ್‌ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸುವ ಕಾರಣದಿಂದ ಹೊಗೆಬತ್ತಿಯ ಕಿಡಿಯೂ ಬೆಂಕಿಗೆ ಕಾರಣವಾಗಲೂಬಹುದು. ತ್ಯಾಜ್ಯದ ರಾಶಿ ಇರುವ ಪ್ರದೇಶಕ್ಕೆ ಯಾರು ಬೇಕಾದರೂ ಬಂದು ಹೋಗುವಂತಹ ಪರಿಸ್ಥಿತಿ ಇದೆ.

ತ್ಯಾಜ್ಯದ ಮೇಲೆ ಮಣ್ಣು
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಬೆಂಕಿಯ ಪರಿಣಾಮ ವಿಷಪೂರಿತ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೂಲಕ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಬೆಂಕಿ ವ್ಯಾಪಿಸದಂತೆ ತ್ಯಾಜ್ಯದ ಮೇಲೆ ಮಣ್ಣು ಸುರಿಯಲಾಗುತ್ತಿದೆ. ಸ್ಥಳೀಯರ ಆರೋಗ್ಯ ತಪಾಸಣೆಗೆ ಸೂಚಿಸಲಾಗಿದೆ.
– ಡಾ| ವೈ. ಭರತ್‌ ಶೆಟ್ಟಿ,ಶಾಸಕರು

ವಾಸ್ತವ್ಯಹೂಡಲಿ
ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಅಧಿಕಾರಿಗಳು ಒಂದು ದಿನ ರಾತ್ರಿ ಡಂಪಿಂಗ್‌ ಯಾರ್ಡ್‌ನ ಸಮೀಪದಮನೆಗಳಲ್ಲಿ ವಾಸ್ತವ್ಯ ಹೂಡಲಿ. ‌ ಮನೆ ಮಂದಿ ಎಲ್ಲ ಅಧಿಕಾರಿಗಳ ಮನೆಯ ಎಸಿ ರೂಮಿನಲ್ಲಿ ಮಲಗುತ್ತೇವೆ. ನಮ್ಮ ಒಂದು ದಿನದ ಸಂಕಷ್ಟ ಆಗ ಅಧಿಕಾರಿಗಳಿಗೆ ಗೊತ್ತಾಗಬಹುದು. ಈ ಮೂಲಕವಾದರೂ ಸಮಸ್ಯೆ ಪರಿಹಾರವಾಗಲಿ.
– ರವೀಂದ್ರ ನಾಯಕ್‌, ಸ್ಥಳೀಯರು

ಚಿತ್ರ: ಸತೀಶ್‌ ಇರಾ
•ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next